ಪುತ್ತೂರು ತಾಲೂಕು ಮೊಗೇರ ಸಂಘದ ವಿಶೇಷ ಸಾಮಾನ್ಯ ಸಭೆ

0

ಪುತ್ತೂರು: ಪುತ್ತೂರು ತಾಲೂಕು ಮೊಗೇರ ಸಂಘದ ವಿಶೇಷ ಸಾಮಾನ್ಯ ಸಭೆಯು ಜ.7ರಂದು ಪುತ್ತೂರು ಸೈನಿಕರ ಭವನದಲ್ಲಿ ನಡೆಯಿತು. ಡಾ.ರಘು ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಸುಂದರ ಕೇಪುಳು, ಬಾಬು ಕೂರ್ನಡ್ಕ, ರಾಘವ ಖಂಡಿಗ, ಚಿದಾನಂದ ನಿಡ್ಪಳ್ಳಿ,ಸದಾನಂದ ಮಾಸ್ಟರ್, ಪುತ್ತೂರು ತಾಲೂಕಿನ ಮೊಗೇರ ಬಾಂಧವರು ಉಪಸ್ಥಿತರಿದ್ದರು.ಸಂಘದ ಬಲವರ್ಧನೆಯ ಕುರಿತು ಸಮುದಾಯದ ಹಲವರು ಅಭಿಪ್ರಾಯ ಮಂಡಿಸಿದರು.


ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಮೊಗೇರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಮುಖೇಶ್ ಕೆಮ್ಮಿಂಜೆ ಪ್ರಾಸ್ತವಿಕ ಭಾಷಣಗೈದು, ಸದಾನಂದ ಮಾಸ್ಟರ್ ಸ್ವಾಗತಿಸಿ, ಚಂದ್ರಶೇಖರ ಈಶ್ವರಮಂಗಲ ವಂದಿಸಿ,ಚಿತ್ರಾಕ್ಷಿ.ಟಿ ತೆಗ್ಗು ಕಾರ್ಯಕ್ರಮ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here