ಅಡ್ಡಹೊಳೆ: ಬೈಕ್‌ಗಳ ಡಿಕ್ಕಿ-ಇಬ್ಬರಿಗೆ ಗಾಯ

0

ನೆಲ್ಯಾಡಿ: ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಜ.8ರಂದು ಸಂಜೆ ನಡೆದಿದೆ.


ಬೈಕ್ ಸವಾರ ಗುಂಡ್ಯ ನಿವಾಸಿ ತೋಮಸ್ ಕೆ.ಪಿ.(58ವ.)ಹಾಗೂ ಸಹ ಸವಾರ ಸುಬ್ಬ ಎಂಬವರು ಗಾಯಗೊಂಡವರಾಗಿದ್ದಾರೆ. ತೋಮಸ್ ಅವರು ತನ್ನ ಬೈಕ್ (ಕೆಎ01, ಜೆಎಲ್ 3032) ಅಲ್ಲಿ ಪರಿಚಯದ ಸುಬ್ಬ ಎಂಬವರನ್ನು ಕುಳ್ಳಿರಿಸಿಕೊಂಡು ಗುಂಡ್ಯದಿಂದ ಶಿರಾಡಿ ಕಡೆಗೆ ಬರುತ್ತಿದ್ದು ಅಡ್ಡಹೊಳೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ನ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೋಮಸ್ ಅವರ ಹಣೆಗೆ ಹಾಗೂ ಸುಬ್ಬ ಅವರ ಮುಖ, ತಲೆಗೆ ಗಾಯವಾಗಿದೆ. ಸುಬ್ಬ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ತೋಮಸ್ ಅವರು ನೆಲ್ಯಾಡಿ ಆಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ತೋಮಸ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here