ಜ.22: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀರಾಮನಾಮ ತಾರಕ ಯಜ್ಞ

0

ವಿಟ್ಲ: ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯ ಭವ್ಯಮಂದಿರದಲ್ಲಿ ಜ.22ರಂದು ಶ್ರೀರಾಮಲಲ್ಲಾ(ಬಾಲರಾಮ)ನ ಪ್ರತಿಷ್ಠಾಪನೆಯ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀರಾಮನಾಮ ತಾರಕಯಜ್ಞ ಜರಗಲಿದೆ.
ಸೂರ್ಯೋದಯದಿಂದ ಶ್ರೀ ಗುರುದೇವ ಭಜನಾ ಮಂಡಳಿ, ಒಡಿಯೂರು, ಸದ್ಗುರು ಬಳಗ ಹೊಸಂಗಡಿ, ನಾದ ಸಂಕೀರ್ತನಾ ಬಳಗ, ಮಂಗಳೂರು, ಗಾನಸುರಭಿ ಉಜಿರೆ ಇವರಿಂದ ಭಗವನ್ನಾಮ ಸಂಕೀರ್ತನೆ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಯಜ್ಞ ಆರಂಭಗೊಳ್ಳಲಿದೆ. ಮಧ್ಯಾಹ್ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಲಿದ್ದಾರೆ. ಬಳಿಕ ಯಜ್ಞದ ಪೂರ್ಣಾಹುತಿ, ಮಹಾಪೂಜೆ, ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ಗಂಟೆಯಿಂದ ಹರಿದಾಸ ಡಾ. ಎಸ್.ಪಿ. ಗುರುದಾಸ್ ಅವರಿಂದ ಶ್ರೀರಾಮ-ಗುಣಧಾಮ ಕಥಾ ಸಂಕೀರ್ತನೆ ನಡೆಯಲಿದೆ ಎಂದು‌ ಸಂಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here