ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆ

0

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಜ.9ರಂದು ಮಂಗಳೂರಿನಲ್ಲಿ ನಡೆಯಿತು. ಫೆಬ್ರವರಿ 25ರಿಂದ  28ರ ವರೆಗೆ ನಡೆಯುವ ಜಾತ್ರೋತ್ಸವದ ಅತ್ಯಂತ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಆಮಂತ್ರಣ  ಪತ್ರಿಕೆಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕಳುಹಿಸಿಕೊಡುವ ಬಗ್ಗೆ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷರರಾಗಿ ಶೈಲೇಂದ್ರ ಸುವರ್ಣ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕಂಕನಾಡಿ ಗರಡಿಯ ಮುಖ್ಯಸ್ಥರಾದ ಕೆ ಚಿತ್ತರಂಜನ್  ಕಂಕನಾಡಿ, ಗೆಜ್ಜೆಗಿರಿ ಆಡಳಿತ ಸಮಿತಿಯ ಅಧ್ಯಕ್ಷ ಪಿತಾಂಬರ ಹೆರಾಜೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಎಸ್ ಆರ್ ಶೈಲೇಂದ್ರ ಸುವರ್ಣ, ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ  ಹರೀಶ್ ಪೂಜಾರಿ ಬಳೆಂಜ, ಎಂ ಜಯನಂದ ಪೂಜಾರಿ, ಸಂತೋಷ್ ಪೂಜಾರಿ ಉಗ್ಗೇಲ್ ಬೆಟ್ಟು,  ಶುಭ ರಾಜೇಂದ್ರ ಪೂಜಾರಿ, ಜಯರಾಮ ಪೂಜಾರಿ ಸುಳ್ಯ, ಜಯರಾಮ್ ಬಂಗೇರ ಬೆಳ್ತಂಗಡಿ, ವಿದ್ಯಾ ರಾಕೇಶ್, ಶೇಖರ್ ಅಮೀನ್ ಮರೋಲಿ, ಹರೀಶ ಸನಿಲ್, ಮಂಗಳೂರು, ಪೃಥ್ವಿರಾಜ್ ಎಂ ಕಂಕನಾಡಿ, ವಿಶ್ವನಾಥ್ ಕುಂದರ್ ಶಕ್ತಿನಗರ, ಕುಸುಮಾಕರ್ ಕುಂಪಲ, ಮತ್ತಿತರು ಗಣ್ಯರು ಹಾಜರಿದ್ದು, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಅವರು ಸ್ವಾಗತಿಸಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ವಂದಿಸಿದರು.

LEAVE A REPLY

Please enter your comment!
Please enter your name here