![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/01/WhatsApp-Image-2024-01-11-at-12.45.48-PM.jpeg)
ಪುತ್ತೂರು: ಅಮ್ಮ ಕಲಾವಿದರು ಬಹರೈನ್ ಸಾರಥ್ಯದಲ್ಲಿ ಬಹರೈನ್ನಲ್ಲಿರುವ ಕನ್ನಡ ಭವನ ಸಭಾಂಗಣದಲ್ಲಿ ಅಷ್ಟಾವಧನ ಸೇವೆ ಸಹಿತ ಶ್ರೀದುರ್ಗಾಪೂಜೆ ನಡೆಯಲಿದ್ದು ಆ ಪ್ರಯುಕ್ತ ಜ.12ರಂದು ಸಂಜೆ 5.30 ರಿಂದ 7ರತನಕ ಗಾನಗಂಧರ್ವ ಬಿರುದಾಂಕಿತ ಕಲರ್ಸ್ ಕನ್ನಡ ಖ್ಯಾತಿಯ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ದಾಸ ಸಂಕೀರ್ತನೆ ನಡೆಯಲಿದೆ. ಹಾರ್ಮೊನಿಯಂ ಮತ್ತು ಗಾಯನದಲ್ಲಿ ದಿವ್ಯ ನಿಧಿ ರೈ, ಕೊಳಲಿನಲ್ಲಿ ದಿವ್ಯ ಧನುಷ್ ರೈ, ರಿದಂ ಪ್ಯಾಡ್ನಲ್ಲಿ ಯಕ್ಷಿತ್ ಶೆಟ್ಟಿ, ಕೀಬೋರ್ಡ್ನಲ್ಲಿ ದಿವ್ಯ ರಾಜ್ ರೈ, ತಬಲದಲ್ಲಿ ಸುರೇಶ್ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಹರೈನ್ನಲ್ಲಿ ನೆಲೆಸಿರುವ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿರುತ್ತದೆ.