ಎಲ್ ಐ ಸಿ ನಿವೃತ್ತ ಅಧಿಕಾರಿಗಳ ಘಟಕದಿಂದ ಪುತ್ತೂರು ಪ್ರಜ್ಞಾ ಆಶ್ರಮಕ್ಕೆ ಮರದ ಬೆಂಚುಗಳ‌ ಕೊಡುಗೆ

0

ಪುತ್ತೂರು: ಭಾರತೀಯ ಜೀವ ವಿಮಾ ನಿಗಮದ (ಎಲ್ ಐ ಸಿ) ನಿವೃತ್ತ ಅಧಿಕಾರಿಗಳ ಉಡುಪಿ ವಿಭಾಗದ ಘಟಕದಿಂದ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಮರದ ಬೆಂಚುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಎಲ್ ಐ ಸಿ ನಿವೃತ್ತ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ನೀಡಿರುವ ಧನಸಹಾಯದಿಂದ ಐದು ಮರದ ಬೆಂಚುಗಳನ್ನು ಜ.12ರಂದು ಆಶ್ರಮದ ಅಣ್ಣಪ್ಪ ದಂಪತಿಗೆ ಸಂಘಟನೆಯ ಅಧ್ಯಕ್ಷ ಭೋಜ ನಾಯ್ಕ ಮತ್ತು ಪ್ರಧಾನ ಕಾರ್ಯದರ್ಶಿ ಶಶಿಧರ ಜೆನ್ನಿಯವರು ಹಾಗು ಇತರ ಪದಾಧಿಕಾರಿಗಳು ಹಸ್ತಾಂತರಿಸಿದರು. ಈ ಸಂದರ್ಭ ಸದಸ್ಯರಾದ ವಿಶ್ವನಾಥ ಗೌಡ, ರವಿಂದ್ರನಾಥ, ಬಾಲಕೃಷ್ಣ ನಾಯ್ಕ್, ಸುರೇಂದ್ರ ರೈ, ನಾರಾಯಣ ಗೌಡ, ಲಿಂಗಪ್ಪ ಗೌಡ, ಶಾರದಾ, ನಾರಾಯಣ ನಾಯ್ಕ್, ಬಾಬು ನಾಯ್ಕ್, ಎಂ ಜಿ ನಾಯ್ಕ್, ಶಶಿಧರ ಹೆಗ್ಡೆ, ಚಂದ್ರು, ಸುಬ್ಬ ನಾಯ್ಕ್, ಶಶಿಧರ್, ಶಿವಾನಂದ ಮೊಯ್ಲಿ ಈ ಸಂದರ್ಭ ಉಪಸ್ಥಿತರಿದ್ದರು. ಇದೇ ಸಂದರ್ಭ ಆಶ್ರಮದ 2 ತಿಂಗಳ ಬಾಡಿಗೆಯಾಗಿ ಸಂಘದ ಸದಸ್ಯರಾದ ಶಶಿಧರ್ ಮತ್ತು ಶಾರದಾ ರವಿರಾವ್ ಅವರು ತಲಾ ರೂ.2 ಸಾವಿರವನ್ನು ಆಶ್ರಮದ ಅಣ್ಣಪ್ಪ ದಂಪತಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here