ಕಡಬ: ಹುಲ್ಲು ತೆಗೆಯುವ ವೇಳೆ ಸಹೋದರರ ನಡುವೆ ತಕರಾರು, ಹಲ್ಲೆ- ಪ್ರಕರಣ ದಾಖಲು

0

ಕಡಬ: ಹುಲ್ಲು ತೆಗೆಯುವ ಮೆಷಿನ್ ಎಳೆದೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಗಂಗಾಂಧರ ಎಂಬವರು ಠಾಣೆಗೆ ದೂರು ನೀಡಿದವರು. ತಾನು ಮನೆ ಎದುರು ಕಳೆ ಹುಲ್ಲು ತೆಗೆಯುತ್ತಿದ್ದ ವೇಳೆ ಅಣ್ಣ ವಸಂತ ಎಂಬವರು ತಕರಾರು ತೆಗೆದು ಕೈಯಲ್ಲಿದ್ದ ಮೆಷಿನ್ ಎಳೆದುಕೊಂಡು ತನ್ನ ಪತ್ನಿಗೂ ಹಲ್ಲೆ ನಡೆಸಿದಲ್ಲದೆ, ಅತ್ತಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಡಬ ಪೊಲೀಸರು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here