ಈಶ್ವರಮಂಗಲ: ಭಜನಾ ರಂಗಪ್ರವೇಶ ಹಾಗೂ ಗುರುವಂದನಾ ಕಾರ್ಯಕ್ರಮ

0

ಪುತ್ತೂರು:ಈಶ್ವರಮಂಗಲ ಹನುಮಗಿರಿ ಶ್ರೀ ಕೊದಂಡರಾಮ ಅಮರಗಿರಿ ಮಕ್ಕಳ ಕುಣಿತ ಭಜನಾ ಸಂಘ ಇದರ ವತಿಯಿಂದ ಮಕ್ಕಳ ಭಜನಾ ರಂಗಪ್ರವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಜ.6ರಂದು ಹನುಮಗಿರಿಯಲ್ಲಿ ನಡೆಯಿತು.

ಅತಿಥಿಯಾಗಿ ಹನುಮಗಿರಿ ಧರ್ಮದರ್ಶಿ ಶಿವರಾಂ ಪಿ, ಅರಿಯಡ್ಕ ಭಜನಾ ಮಂಡಳಿಯ ಎಮ್‌ ಜಿ ಗಂಗಾಧರ ರೈ, ಸಾಂತ್ಯ ನಿವೃತ್ತ ಶಿಕ್ಷಕ ಆನಂದ ಮಾಸ್ತರ್‌ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

ಮಕ್ಕಳಿಂದ ಭಜನಾ ಗುರುಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಗುರುದಕ್ಷಿಣೆ ನೀಡಲಾಯಿತು.ಸಂಚಾಲಕಿ ಜಯಂತಿ ಗಂಗಾಧರ ಪುಳಿಮಾರಡ್ಕ ತಾಳ, ಗುರುತಿನ ಚೀಟಿ ವಿತರಿಸಿದರು.ಕಾರ್ಯಕ್ರಮವನ್ನು ಸೂರಜ್‌ ರೈ ಪ್ರಾರ್ಥಿಸಿ, ಪುರಜಿತ್‌ ಜೆ ಎಸ್‌ ಸ್ವಾಗತಿಸಿ, ವೀಣಾ ವಂದಿಸಿ, ಸುಮಲತಾ ಪಿ.ಕೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಭಜಕರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here