ಕುಂಬ್ರದಲ್ಲಿ ಶ್ರೀ ನಾರಾಯಣ ಸರ್ವೀಸ್ ಸ್ಟೇಷನ್ ಶುಭಾರಂಭ

0

ಪುತ್ತೂರು: ಕುಂಬ್ರ ಕೆ.ಇ.ಬಿ. ಸಬ್ ಸ್ಟೇಷನ್ ಬಳಿ (ಬೆಳ್ಳಾರೆ ರಸ್ತೆ) ಶ್ರೀ ನಾರಾಯಣ ಸರ್ವೀಸ್ ಸ್ಟೇಷನ್ ಜ.14 ರಂದು ಬೆಳಿಗ್ಗೆ ಸ್ವಂತ ಕಟ್ಟಡದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಶುಭಾರಂಭಗೊಂಡಿತು. ಪುರೋಹಿತ ಸುಬ್ರಹ್ಮಣ್ಯ ಭಟ್‌ ಅಡ್ಯೆತ್ತಮಾರ್‌ ಪೂಜಾ ವಿಧಿವಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ನಾರಾಯಣ ನಾಯ್ಕ, ಲಲಿತ, ನಿತಿನ್‌ ಡಿ ಎಸ್‌, ಸೊಸೆ ಸೌಮ್ಯ, ಮೊಮ್ಮಗ ವಿಹಾನ್‌ ಉಪಸ್ಥಿತರಿದ್ದರು.

ಸವಿತ ಡಿ ಎನ್‌ ಸ್ವಾಗತಿಸಿ ನೂತನ ಸರ್ವಿಸ್‌ ಸ್ಟೇಷನ್‌ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಎಲ್ಲಾ ತರಹದ ಲಘು, ಘನ ವಾಹನಗಳು, ಹಿಟಾಚಿ, ಬುಲ್ಡೋಜರ್‌, ಕ್ರೇನ್‌, ಮೊದಲಾದ ವಾಹನಗಳನ್ನು ಸರ್ವಿಸ್‌ ಮಾಡಕೊಡಲಾಗುವುದು ಎಂದು ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here