ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

0

ಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೆ 2012ರಿಂದ ತಲೆಮರೆಸಿಕೊಂಡಿದ್ದ ಚಿಕ್ಕಮುಡ್ನೂರು ನಿವಾಸಿ ಮೋಹನ್‌ ಕುಮಾರ್‌ ಹೆಗ್ಡೆ ಯಾನೆ ಮೋಹನ್‌(38) ಎಂಬಾತನನ್ನು ಪುತ್ತೂರಿನಲ್ಲಿ ಬಂಧಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್‌ ನಿರೀಕ್ಷಕ ರವಿ ಬಿ ಎಸ್‌ ಮತ್ತು ಉಪನಿರೀಕ್ಷಕ ಜಂಬೂರಾಜ್‌ ಮಹಾಜನ್‌ ಮಾರ್ಗದರ್ಶನದಲ್ಲಿ ಹೆಡ್‌ ಕಾನ್ಸ್ಟೆಬಲ್‌ ಮಧು ಕೆ ಎನ್‌ ಮತ್ತು ಹಕ್ಕಿಮ್‌ ಪುತ್ತೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಜ.19ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆಆರೋಪಿ ವಿರುದ್ಧ ‌ಅ.ಕ್ರ 40/2012 ಕಲಂ 326, 120(b), 307 r/w 34 Ipc ಯಂತೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here