ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ – ಪುತ್ತೂರಿನಲ್ಲಿ ದೇವಸ್ಥಾನ, ಮಂದಿರಕ್ಕೆ ಆಟೋ ರಿಕ್ಷಾದಲ್ಲಿ ಉಚಿತ ಪ್ರಯಾಣ

0

ಪುತ್ತೂರು ಬಿಎಮ್ಎಸ್ ಮೂವರು ಆಟೋಚಾಲಕರಿಂದ ಹೀಗೊಂದು ರಾಮನ ಸೇವೆ

ಪುತ್ತೂರು: ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪುತ್ತೂರು ಬಿಎಮ್ಎಸ್ ಅಟೋ ಚಾಲಕ ಮಾಲಕರ ಸಂಘದ ಸದಸ್ಯರಾದ ಎಮ್ ಟಿ ರಸ್ತೆ ಪಾರ್ಕ್ ನ ಮೂವರು ಆಟೋ ಚಾಲಕರಿಂದ ಸ್ಥಳೀಯ ದೇವಸ್ಥಾನ ಮತ್ತು ಮಂದಿರಕ್ಕೆ ಒಂದು ದಿನದ ಉಚಿತ ಪ್ರಯಾಣದ ಸೇವೆ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.
ಎಮ್ ಟಿ ರಸ್ತೆ ಪಾರ್ಕ್ ನ ಸುಧೀರ್ ಕೃಷ್ಣ ಬೈರಿಕಟ್ಟೆ ಮನೆ ಕರ್ಮಲ, ಬನ್ನೂರು, ಸುದೇಶ್ ಕೆ ಬರಿಕಟ್ಟೆ ಮನೆ, ಕರ್ಮಲ, ಬನ್ನೂರು, ಕೋಟಿ( ಕೃಷ್ಣ) ದೊಡ್ಡಡ್ಕ ಎಂ ರೋಡ್ ಪಾರ್ಕ್ ಅವರು ಜ.22ರ ಒಂದು ದಿನ ಪ್ರಯಾಣಿಕರಿಗೆ ಸ್ಥಳೀಯ ದೇವಸ್ಥಾನ ಮತ್ತು ಭಜನಾ ಮಂದಿರಕ್ಕೆ ಹಾಗೂ ಅಲ್ಲಿಂದ ಮನೆಗೆ ಉಚಿತ ಪ್ರಯಾಣ ಸೇವೆ ನೀಡುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here