ಪುತ್ತೂರು: ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಯುವತಿಗೆ ಬೇಕಿದೆ ಸಹಾಯಹಸ್ತ

0

ಪುತ್ತೂರು: ಜೀವನದಲ್ಲಿ ಏನೇನೋ ಸಾಧನೆ ಮಾಡಬೇಕೆಂದುಕೊಂಡಿದ್ದ ಯುವತಿಯೋರ್ವಳು ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆ ಬೆಡ್ ಮೇಲೆ ಮಲಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪುತ್ತೂರು ನೆಹರೂನಗರದ ದಿ.ಆನಂದ ನಾಯ್ಕ ಎಂಬವರ ಪುತ್ರಿ 29ರ ಹರೆಯದ ಐಶ್ಚರ್ಯ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಯುವತಿಯಾಗಿದ್ದಾರೆ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಕುಟುಂಬ ಇದಾಗಿದ್ದು, ಯುವತಿಯ ತಾಯಿ ವಿಮಲ ಮಗಳ ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಯಾಚಿಸಿದ್ದಾರೆ. ಚಿಕಿತ್ಸೆಗಾಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ವಿಮಲಾ ಈಗ ನೆರವಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರೂ.40 ಲಕ್ಷಕ್ಕೂ ಅಧಿಕ ಮೊತ್ತದ ಅವಶ್ಯಕತೆ
ಐಶ್ವರ್ಯ ಬೆಂಗಳೂರಿನ ಅಫೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಿವರ್‌ ಟ್ರಾನ್ಸ್‌ಪ್ಲಾಂಟ್‌ನಿಂದ ಮಾತ್ರ ಐಶ್ವರ್ಯಳ ಜೀವ ಉಳಿಸಲು ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕಾಗಿ 40 ಲಕ್ಷದಷ್ಟು ಹಣದ ಅವಶ್ಯಕತೆ ಇದ್ದು, ಈಗಾಗಲೇ ಸಾಲಸೋಲ ಮಾಡಿ ಲಕ್ಷಾಂತರ ಹಣ ಖರ್ಚು ಮಾಡಿದ್ದೇನೆ. ದಯವಿಟ್ಟು ದಾನಿಗಳು ಆರ್ಥಿಕ ಸಹಕಾರ ನೀಡುವ ಮೂಲಕ ನನ್ನ ಮಗಳನ್ನು ಬದುಕಿಸಿಕೊಡಿ ಎಂದು ವಿಮಲಾ ಮನವಿ ಮಾಡಿಕೊಂಡಿದ್ದಾರೆ.

ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಐಶ್ವರ್ಯ
ಐಶ್ವರ್ಯ ಜೀವ ಉಳಿಸುವ ನಿಟ್ಟಿನಲ್ಲಿ ದಾನಿಗಳ ಆರ್ಥಿಕ ನೆರವು ಬಹಳ ಅಗತ್ಯವಾಗಿದ್ದು, ಬಡ ತಾಯಿಯ ಮನವಿಗೆ ಸ್ಪಂಧಿಸುವ ಮೂಲಕ ಹೃದಯವಂತ ದಾನಿಗಳು ಒಂದು ಜೀವವನ್ನು ಉಳಿಸಲು ತಮ್ಮ ಕೈಯಿಂದ ಸಾಧ್ಯವಾಗುವ ಸಹಾಯ ಮಾಡಬಹುದಾಗಿದೆ. ಆರ್ಥಿಕ ನೆರವು ನೀಡುವವರು ಐಶ್ವರ್ಯ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ.

ಖಾತೆ ವಿವರ
ಬ್ಯಾಂಕ್ ಹೆಸರು ಆರ್‌ಬಿಎಲ್, ಅಕೌಂಟ್ ನಂಬರ್ 2223330007177023, ಅಕೌಂಟ್ ಹೆಸರು ಐಶ್ವರ್ಯ ಎ, ಐಎಫ್‌ಎಸ್‌ಸಿ ಕೋಡ್- RATN0VAAPIS (ಇಲ್ಲಿ ಎನ್ ಬಳಿಕ ಸೊನ್ನೆ)

LEAVE A REPLY

Please enter your comment!
Please enter your name here