ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘ: ಅಧ್ಯಕ್ಷರಾಗಿ ಜನಾರ್ದನ ಭಟ್- ಉಪಾಧ್ಯಕ್ಷರಾಗಿ ಪ್ರೀತಂ ಪೂಂಜಾ ಅವಿರೋಧ ಆಯ್ಕೆ

0

ಪುಣಚ: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಜ.25ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಅಧ್ಯಕ್ಷರಾಗಿ ಜನಾರ್ದನ ಭಟ್ ಅಮೈ, ಉಪಾಧ್ಯಕ್ಷರಾಗಿ‌ ಪ್ರೀತಂ ಪೂಂಜಾ ಅಗ್ರಾಳ ರವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷತೆಗೆ ಜನಾರ್ದನ ಭಟ್ ರವರ ಹೆಸರನ್ನು ಬಾಲಚಂದ್ರ ಕೆ ಸೂಚಿಸಿ, ವಿಘ್ನೇಶ್ವರ ಎನ್ ಅನುಮೋದಿಸಿದರು. ಉಪಾಧ್ಯಕ್ಷತೆಗೆ ಪ್ರೀತಂ ಪೂಂಜಾ ರವರ ಹೆಸರನ್ನು ಪ್ರವೀಣ ಪ್ರಭು ಡಿ ಸೂಚಿಸಿ, ಚಂದಪ್ಪ ನಾಯ್ಕ ಕೆ ಅನುಮೋದಿಸಿದರು.


ಒಟ್ಟು 13 ಸ್ಥಾನಗಳನ್ನು ಹೊಂದಿರುವ ಪುಣಚ ಹಾಗೂ ಕೇಪು ಗ್ರಾಮಗಳ ವ್ಯಾಪ್ಯಿಯನ್ನು ಹೊಂದಿರುವ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರ ಸ್ಥಾನಕ್ಕೆ ಜ.13 ರಂದು ಚುನಾವಣೆ ನಡೆದಿದ್ದು ಎಲ್ಲ ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಚುನಾವಣಾ ಅಧಿಕಾರಿ ಎನ್. ಜೆ. ಗೋಪಾಲ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಸಂಘದ ನಿರ್ದೇಶಕರುಗಳಾದ ಬಾಲಚಂದ್ರ ಕೆ, ಜಯರಾಮ ನಾಯ್ಕ, ಕಿಶೋರ್ ಕುಮಾರ್, ತಾರಾನಾಥ ಆಳ್ವ, ಪ್ರವೀಣ ಪ್ರಭು, ದಯಾನಂದ ಬಿ. ಚಂದಪ್ಪ ನಾಯ್ಕ, ವಿಘ್ನೇಶ್ವರ ಎನ್, ರಾಧಾಕೃಷ್ಣ, ಶೀಲತಾ, ಹರಿಣಾಕ್ಷಿ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಪ್ಪ ಮೂಲ್ಯ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here