ಡಾ| ಸುಂದರ ಕೇನಾಜೆ ಚಿತ್ರಕತೆ ನಿರ್ದೇಶನದ, ಭರತೇಶ ಅಲಸಂಡೆಮಜಲು, ಡಾ. ವಿಶ್ವನಾಥ ಬದಿಕಾನ ನಿರ್ಮಾಪಕತ್ವ- ’ಪುರ್ಸ ಕಟ್ಟುನ’ ಸಾಕ್ಷ್ಯಚಿತ್ರ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಆಯ್ಕೆ

0


ಪುತ್ತೂರು: ಡಾ.ಸುಂದರ ಕೇನಾಜೆ ಚಿತ್ರಕತೆ-ನಿರ್ದೇಶನ, ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿರುವ “ಪುರ್ಸ ಕಟ್ಟುನ, ಇನಿ- ಕೋಡೆ- ಎಲ್ಲೆ” ಸಾಕ್ಷ್ಯಚಿತ್ರ ಮತ್ತೆ ಇನ್ನೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಅರ್ಹತೆ ಪಡೆದಿದೆ.


ಈ ಚಲನಚಿತ್ರೋತ್ಸವಕ್ಕೆ 82 ದೇಶಗಳ 2971 ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಲ್ಲಿ 326 ರಲ್ಲಿ ಒಂದಾಗಿ ಆಯ್ಕೆಯಾದ ಇದು ಈ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಅತೀ ಹೆಚ್ಚು ಭಾಗವಹಿದ ದಾಖಲೆಯಲ್ಲಿ ಅರ್ಹತೆ ಪಡೆದಿದೆ. ಫೆ.11 ರಿಂದ 15 ವರೆಗೆ ಈ ಚಲನಚಿತ್ರೋತ್ಸವದ ರಾಜಸ್ಥಾನದ ಜೈಪುರದಲ್ಲಿ ನಡೆಯಲಿದ್ದು ಜೈಪುರದ ನಾನಾ ಕಡೆ ಇದರ ಪ್ರದರ್ಶನ, ಚರ್ಚೆ, ಸಂವಾದಗಳೂ ನಡೆಯಲಿವೆ. ಜೈಪುರ ಸಾಹಿತ್ಯೋತ್ಸವದ ನಂತರ ಈ ಚಲನಚಿತ್ರೋತ್ಸವ ನಡೆಯಲಿದೆ. ಈ ಸಾಕ್ಷ್ಯ ಚಿತ್ರವನ್ನು ತುಳು ವಿಕಿಪೀಡಿಯದ ಸಹಕಾರದಿಂದ ತಯಾರಿಸಲಾಗಿ ಅಂತರ್ ಜಾಲಕ್ಕೆ ಬಿಡುಗಡೆ ಮಾಡಲಾಗಿದೆ. ಇದು ಈಗಾಗಲೇ ತ್ರಿಶೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅರ್ಹತೆ ಪಡೆದು 5 ದಿನಗಳ ಕಾಲ ಪ್ರದರ್ಶನ, ಗೋಷ್ಠಿ, ಚರ್ಚೆಗಳಿಗೆ ಒಳಪಟ್ಟಿತು ಈ ಗೋಷ್ಠಿಗಳಲ್ಲಿ ನಿರ್ದೇಶಕರಾದ ಡಾ| ಸುಂದರ ಕೇನಾಜೆ ಭಾಗವಹಿಸಿ ವಿಚಾರ ಮಂಡಿಸಿದ್ದರು ಎಂದು ನಿರ್ಮಾಪಕರಾದ ಭರತೇಶ್ ಅಲಸಂಡೆಮಜಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here