![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/01/273ab54c-1cdb-4316-b4d4-cff7f4332e71.jpg)
ಪುತ್ತೂರು: ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಒಳಪಡುವ ಪುತ್ತೂರು ವಿಧಾನಸಭಾ ಕ್ಷೇತ್ರದ ಅನೇಕ ಅಕ್ರಮಸಕ್ರಮ ಅರ್ಜಿಗಳು ಬಾಕಿ ಇದೆ. ಬಾಕಿ ಇರುವ ಅರ್ಜಿಗಳು ಯಾಕೆ ಬಾಕಿಯಾಗಿದೆ ಎಂಬುದನ್ನು ನನ್ನ ಗಮನಕ್ಕೆ ತರಬೇಕು. ಅರ್ಜಿ ವಿಲೇವಾರಿಗೆ ಯಾರಾದ್ರು ಲಂಚ ತಗೊಂಡ್ರೆ ಹುಷಾರ್ ಸುಮ್ಮನೆ ಬಿಡುವುದಿಲ್ಲ. ಲಂಚಕ್ಕೆ ಅವಕಾಶವೇ ಇಲ್ಲ ಎಂದು ಎಚ್ಚರಿಸಿದ ಶಾಸಕರು ಬಡವರಿಗೆ ತೊಂದರೆ ಕೊಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ತಿಳಿಸಿದರು.
ಬಂಟ್ವಾಳ ತಾಲೂಕು ವ್ಯಾಪ್ತಿಯ ಪುಣಚ, ಪೆರುವಾಯಿಯ ಅನೇಕ ಅಕ್ರಮ-ಸಕ್ರಮ ಅರ್ಜಿಗಳು ಅತ್ಯಧಿಕ ಸಂಖ್ಯೆಯಲ್ಲಿ ಬಾಕಿ ಇದೆ ಈ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದು ಸಭೆಯಲ್ಲಿದ್ದ ಬಂಟ್ವಾಳ ಉಪ ತಹಶಿಲ್ದಾರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಪ ತಹಶಿಲ್ದಾರ್ ನಿಮ್ಮ ಗಮನಕ್ಕೆ ತಂದು ಅರ್ಜಿ ವಿಲೇವಾರಿ ಮಾಡುವುದಾಗಿ ತಿಳಿಸಿದರು.