ನಾಳೆ(ಜ.31) ಎಲಿಯ ಜಾತ್ರೆಗೆ ಗೊನೆ ಮುಹೂರ್ತ

0

ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿಯ ಎಲಿಯ ಜಾತ್ರೋತ್ಸವಕ್ಕೆ ಜ.31ರಂದು ಗೊನೆ ಮುಹೂರ್ತ ನಡೆಯಲಿದೆ. ಬೆಳಿಗ್ಗೆ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ 11.32ರ ಮುಹೂರ್ತದಲ್ಲಿ ಮಜಲುಗದ್ದೆ ಎಂಬಲ್ಲಿನ ತೋಟದಲ್ಲಿ ಗೊನೆ ಕಡಿದು ಅಲ್ಲಿಂದ ದೇವಳಕ್ಕೆ ಮೆರವಣಿಗೆಯ ಮೂಲಕ ತಂದು ದೇವಳದಲ್ಲಿ ಪೂಜೆ ನಡೆದು ಜಾತ್ರೆಗೆ ಚಾಲನೆ ನೀಡಲು ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here