ಕೆದಂಬಾಡಿ ಗ್ರಾ.ಪಂ ಆಸರೆ ಸಂಜೀವಿನಿ ಒಕ್ಕೂಟದಿಂದ ಹಾಳೆ ತಟ್ಟೆ ಘಟಕದ ಉದ್ಘಾಟನೆ

0

ಪುತ್ತೂರು : ಕೆದಂಬಾಡಿ ಗ್ರಾಮ ಪಂಚಾಯತ್‌ನ ಆಸರೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಕೆದಂಬಾಡಿ ಇದರ ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಹಾಳೆ ತಟ್ಟೆ ಘಟಕದ ಉದ್ಘಾಟನಾ ಸಮಾರಂಭವು ನಂದಿನಿ ರೈತ ಮಹಿಳಾ ಉತ್ಪಾದಕರ ಸಂಘದ ಸದಸ್ಯೆ ಹಾಗೂ ಒಕ್ಕೂಟದ ಕಾರ್ಯದರ್ಶಿ ಕವಿತಾ ಐತಪ್ಪ ಪೂಜಾರಿ ಇದ್ಯಪೆ ಇವರ ಮನೆಯಲ್ಲಿ ಜ.31 ರಂದು ನಡೆಯಿತು.

ಒಕ್ಕೂಟ ದ ನಿಕಟ ಪೂರ್ವ ಅಧ್ಯಕ್ಷೆ ಚಂದ್ರಾವತಿ ರೈ ಕಾರ್ಯಕ್ರಮ ವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ ಡೇ ಎನ್.ಆರ್.ಎಲ್.ಎಂ ತಾಲೂಕು ಪಂಚಾಯತ್ ಪುತ್ತೂರು ಯೋಜನೆಯ ಬಗ್ಗೆ, ರೈತ ಉತ್ಪಾದಕರ ಸಂಘದ ಕಾರ್ಯವೈಖರಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮಿ ಬಲ್ಲಾಳ್, ವಲಯ ಮೇಲ್ವಿಚಾರಕಿ ನಮಿತಾ ತಾಲೂಕು ಪಂಚಾಯತ್ ಪುತ್ತೂರು, ಒಕ್ಕೂಟದ ಸಿಬ್ಬಂದಿಗಳಾದ ಲೀಲಾ ಎಸ್ ರೈ ಮುಖ್ಯ ಪುಸ್ತಕ ಬರಹಗಾರರು, ಪೂರ್ಣಿಮಾ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಗಿರಿಜಾ ಕೃಷಿ ಉದ್ಯೋಗ ಸಖಿ, ಪುಷ್ಪಾವತಿ ಕೃಷಿ ಸಖಿ, ವಸಂತಿ ಪಶು ಸಖಿ ಹಾಗೂ ನಂದಿನಿ ರೈತ ಉತ್ಪಾದಕರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಐತಪ್ಪ ಪೂಜಾರಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here