ನಾಳೆ(ಫೆ.4): ಕಡಬ ದರ್ಗಾ ಶರೀಫ್ ಉರೂಸ್ ಸಮಾರೋಪ-ಸೌಹಾರ್ದ ಸಂಗಮ, ಬೃಹತ್ ಸಂದಲ್ ಮೆರವಣಿಗೆ

0

ಕಡಬ: ಬರ್ಕತುಲ್ ಇಸ್ಲಾಂ ಮುಹಿಯ್ಯುದ್ದೀನ್ ಫಂಡ್, ಕೇಂದ್ರ ಜುಮಾ ಮಸೀದಿ ಕಡಬ, ಹಝ್ರತ್ ಶೈಖ್ ಅಬ್ದುಲ್ ಖಾದಿರ್ ಷಾ ವಲಿಯುಲ್ಲಾಹಿ(ಖ.ಸಿ) ದರ್ಗಾ ಶರೀಫ್ ಹಾಗೂ ಶುಹದಾಕಳ್‌ರವರ ಉರೂಸ್ ಸಮಾರೋಪ ಕಾರ್ಯಕ್ರಮ ಫೆ.4ರಂದು ನಡೆಯಲಿದೆ.
ಸಂಜೆ ಗಂಟೆ 6-30ಕ್ಕೆ ಸೌಹಾರ್ದ ಸಂಗಮ ನಡೆಯಲಿದ್ದು ಗೈಬನ್ ಷಾ ವಲಿಯುಲ್ಲಾಹಿ(ಖ.ಸಿ)ರವರ ದರ್ಗಾ ಶರೀಫ್‌ನಿಂದ ಕೇಂದ್ರ ಜುಮಾ ಮಸೀದಿ ವರೆಗೆ ಸಂದಲ್ ಮೆರವಣಿಗೆ ನಡೆಯಲಿದೆ. ಕಡಬ ಟೌನ್ ಜುಮಾ ಮಸೀದಿ ಖತೀಬ್ ಹಾಜಿ ಇಬ್ರಾಹಿಂ ದಾರಿಮಿ ದುವಾ ನೆರವೇರಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಅವರು ದುವಾಗೆ ನೇತೃತ್ವ ನೀಡಲಿದ್ದು ಸಯ್ಯದ್ ಮಶ್‌ಹೂರ್ ಮುಲಕ್ಕೋಯ ತಂಙಳ್ ಕೊಡುವಳ್ಳಿ ಕೇರಳ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಕಡಬ ತಾಲೂಕು ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಹಾಜಿ ಸೈಯದ್ ಮೀರಾ ಸಾಹೇಬ್ ವಹಿಸಲಿದ್ದು ಅತಿಥಿಗಳಾಗಿ ಸಚಿವ ಝಮೀರ್ ಅಹ್ಮದ್ ಖಾನ್, ಎ.ಜೆ ಅಕ್ರಮ್ ಪಾಷಾ, ಸಯ್ಯದ್ ಹಮೀದ್ ತಂಙಳ್, ಇಕ್ಬಾಲ್ ಎಲಿಮಲೆ, ಡಾ.ಸಯ್ಯದ್ ನಝೀರ್ ಸಾಹೇಬ್, ಅಬ್ದುಲ್ ಲತೀಫ್ ಹರ್ಲಡ್ಕ, ಜಲೀಲ್ ಬೈತಡ್ಕ ಮೊದಲಾದವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here