ರಾಷ್ಟ್ರ ಮಟ್ಟದ ಯೋಗಾಸನದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕಾಣಿಯೂರು ಪ್ರಗತಿಯ ಶ್ರೀಮಾ ಕೆ. ಎಚ್ ಅವರಿಗೆ ಚತುರ್ಥ ಸ್ಥಾನ

0

ಕಾಣಿಯೂರು: 67ನೇ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 7ನೇ ತರಗತಿಯ ವಿದ್ಯಾರ್ಥಿನಿ ಶ್ರೀಮಾ ಕೆ. ಎಚ್ ಅವರು ಚತುರ್ಥ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದ ಸಂಗತಾನ್ ಕೇಂದ್ರೀಯ ವಿದ್ಯಾಲಯದಲ್ಲಿ ಫೆ.1ರಿಂದ 4ರವರೆಗೆ ನಡೆದ ಸ್ಪರ್ಧೆಯಲ್ಲಿ ದೆಹಲಿ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ ಹಾಗೂ ವೆಸ್ಟ್ ಬೆಂಗಾಲ್ ತಂಡಗಳು ಭಾಗವಹಿಸಿದವು. ಶ್ರೀಮಾ ಕೆ. ಎಚ್ ಸುಳ್ಯ ತಾಲೂಕಿನ ಹುದೇರಿ ಕುಶಾಲಪ್ಪ ಗೌಡ ಹಾಗೂ ಸುಜಿತಾರವರ ಪುತ್ರಿಯಾಗಿರುವ ಇವರಿಗೆ ಸಂಸ್ಥೆಯ ಶಿಕ್ಷಕಿ ಶಶಿಕಲಾರವರು ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here