ಕೊಂಬಾರು: ಕೆಂಜಲ ಹಾ.ಉ.ಸ.ಸಂ.ಆಡಳಿತ ಮಂಡಳಿಗೆ ಆಯ್ಕೆ – ಅಧ್ಯಕ್ಷ: ರಾಮಕೃಷ್ಣ ಹೊಳ್ಳಾರು, ಉಪಾಧ್ಯಕ್ಷ: ನೀಲಪ್ಪ ಗೌಡ

0

ಕಡಬ: ಕೊಂಬಾರು ಗ್ರಾಮದ ಕೆಂಜಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ರಾಮಕೃಷ್ಣ ಹೊಳ್ಳಾರು, ಉಪಾಧ್ಯಕ್ಷರಾಗಿ ನೀಲಪ್ಪ ಗೌಡ ಮುಗೇರು ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಶ್ರೀಧರ ಗೌಡ ಕಾಪಾರು, ಗಿರಿಯಪ್ಪ ಗೌಡ ಮುಗೇರು, ನೀಲಪ್ಪ ಗೌಡ ಮಣಿಭಾಂಡ, ಮೋಹನಾಂಗಿ ಕೊಡೇಂಕಿರಿ, ಪುಷ್ಪಾವತಿ ಪೆರುಂದೋಡಿ, ವೇದಾವತಿ ಕೂತೂರು, ಧರ್ಮಪಾಲ ಗೌಡ ಕೋಲ್ಕಜೆ, ದೇವರಾಜ್ ಕೋಲ್ಕಜೆಯವರುಗಳು ಆಯ್ಕೆಯಾಗಿದ್ದಾರೆ. ಸುಳ್ಯ ಸಹಕಾರ ಇಲಾಖೆಯ ಅಭಿವೃದ್ದಿ ಅಧಿಕಾರಿ ಶಿವಲಿಂಗಯ್ಯ ಎಂ. ಚುನಾವಣಾಧಿಕಾರಿಯಾಗಿದ್ದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಈಶ್ವರ ಗೌಡ ಕಾಪಾರು, ಹಾಲು ಪರಿವೀಕ್ಷಕಿ ದಿವ್ಯ ಗುಡ್ಡೆಕೇರಿ ಅವರು ಸಹಕರಿಸಿದರು.

LEAVE A REPLY

Please enter your comment!
Please enter your name here