ಮುಕ್ರಂಪಾಡಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0

ಪುತ್ತೂರು: ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ಫೆ.10ರಂದು ಮುಕ್ರಂಪಾಡಿಯಲ್ಲಿ ವೇ.ಮೂ. ಉದಯನಾರಾಯಣ ಕಲ್ಲೂರಾಯರ ನೇತೃತ್ವದಲ್ಲಿ 52ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮುಕ್ರಂಪಾಡಿ ಸುಭದ್ರ ಸಭಾ ಮಂದಿರದ ಬಳಿಯಿರುವ ಅಶ್ವತ್ಥ ಕಟ್ಟೆಯಲ್ಲಿ ನಡೆಯಿತು. ಬೆಳಿಗ್ಗೆ 7ರಿಂದ ಗಣಪತಿ ಹವನ, ಅಶ್ವತ್ಥನಾರಾಯಣ ಪೂಜೆ, ಸಂಜೆ 6ರಿಂದ ದೇವತಾ ಪ್ರಾರ್ಥನೆ, ಸುಭದ್ರ ಮಹಿಳಾ ಭಜನಾ ಮಂಡಳಿ ಮುಕ್ರಂಪಾಡಿ ಇವರಿಂದ ಭಜನಾ ಕಾರ್ಯಕ್ರಮ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸುಡುಮದ್ದು ಪ್ರದರ್ಶನ ನಡೆಯಿತು.

ಸನ್ಮಾನ
ಕಳೆದ ಹಲವಾರು ವರ್ಷಗಳಿಂದ ಮುಕ್ರಂಪಾಡಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ದೆ, ಭಕ್ತಿಯಿಂದ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಹಿರಿಯರಾದ ನಿವ್ರತ್ತ ಶಿಕ್ಷಕ ಹರಿಣಾಕ್ಷ ಮುಕ್ರಂಪಾಡಿ, ಡಯಾಬಿಟಿಸ್ ಎವರ್ನೆಸ್ ಇನಿಶಿಯೇಟಿವ್ ಅವಾರ್ಡ್ 2024 ಪುರಸ್ಕೃತರಾದ ಜನಪ್ರಿಯ ವೈದ್ಯ, ಧಾರ್ಮಿಕ ಮುಂದಾಳು ಡಾ. ಸುರೇಶ ಪುತ್ತೂರಾಯ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here