ಗುತ್ತಿಗಾರು: ಸ್ಕೂಟರ್ ಅಪಘಾತದಿಂದ ಮೃತಪಟ್ಟ ನಡುಗಲ್ಲು ಶಿವರಾಮ ಗೌಡ -ಅಂತಿಮ ಇಚ್ಚೆಯಂತೆ ಪುತ್ತೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ

0

ಪುತ್ತೂರು: ಗುತ್ತಿಗಾರು ಬಾಕಿಲ ಬಳಿ ಫೆ.11ರಂದು ನಡೆದ ಸ್ಕೂಟರ್ ಮತ್ತು ಬಸ್ ಅಪಘಾತದಲ್ಲಿ ಮೃತಪಟ್ಟ ನಡುಗಲ್ಲು ನಿವಾಸಿ ಶಿವರಾಮ ಗೌಡ ಅವರ ಮೃತ ದೇಹದ ಅಂತ್ಯಕ್ರಿಯೆ ಚಿಕ್ಕಪುತ್ತೂರು ಮಡಿವಾಳಕಟ್ಟೆಯ ಸ್ಮಶಾನದಲ್ಲಿ ನಡೆಯಲಿದೆ.

ಕೆಎಸ್‌ ಆರ್‌ ಟಿಸಿ ಬಸ್ಸೊಂದು ಫೆ.11ರಂದು ಶಿವರಾಮ ಗೌಡ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡ ಶಿವರಾಮ ಗೌಡ ಮೃತಪಟ್ಟಿದ್ದರೆ ಸಹಸವಾರೆಯಾಗಿದ್ದ ಅವರ ಪುತ್ರಿ ತೀವ್ರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ಮಂದಿ ಶಿವರಾಮ ಗೌಡರ ಖಾಸಗಿ ಡೈರಿ ತೆರೆದು ನೋಡಿದಾಗ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿತ್ತು. ತಾನು ಮೃತಪಟ್ಟರೆ ತನ್ನ ಅಂತ್ಯಸಂಸ್ಕಾರವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರದಲ್ಲಿರುವ ಮಡಿವಾಳಕಟ್ಟೆ ಸ್ಮಶಾನದಲ್ಲಿ ನೆರವೇರಿಸುವಂತೆ ಮತ್ತು ಚಿತಾ ಭಸ್ಮವನ್ನು ನೇತ್ರಾವತಿ, ಕಾವೇರಿ, ಗಂಗಾ ನದಿಯಲ್ಲಿ ಬಿಡುವಂತೆಯೂ, ಸ್ವಲ್ಪ ಚಿತಾ ಭಸ್ಮವನ್ನು ಮನೆಯ ಬಳಿ ಗುಂಡಿ ತೆಗೆದು ಹಾಕಿ ಅದರ ಮೇಲೆ ಕಲ್ಪವೃಕ್ಷವನ್ನು ನೆಡುಬೇಕು, ಅಲ್ಲದೆ ಪ್ರತಿ ವರ್ಷ ತನ್ನ ನಿಧನದ ದಿನದಂದು ಅನ್ನಸಂತರ್ಪಣೆ ನಡೆಸಬೇಕೆಂದು ಅಂತಿಮ ಇಚ್ಚೆಯನ್ನು ಬರೆದಿಟ್ಟಿದ್ದರು. ಮೃತರ ಇಚ್ಚೆಯಂತೆ ಪುತ್ತೂರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ದತೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here