ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಕ್ಯಾ.ಬ್ರಿಜೇಶ್ ಚೌಟ ಭೇಟಿ

0

ಪುತ್ತೂರು: ಪಂಚಮುಖಿ ಶ್ರೀ ಆಂಜನೇಯ ಸ್ವಾಮಿಯ ಕ್ಷೇತ್ರವಾಗಿರುವ ಹನುಮಗಿರಿಗೆ ನಿವೃತ್ತ ಸೇನಾಧಿಕಾರಿ ಕ್ಯಾ.ಬ್ರಿಜೇಶ್ ಚೌಟರವರು ಫೆ.11ರಂದು ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ಶ್ರೀ ಕೋದಂಡರಾಮ ಸನ್ನಿಧಿ ಹಾಗೂ ಅಮರಗಿರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಧರ್ಮದರ್ಶಿಗಳಾದ ಶಿವರಾಮ ಪಿ, ಶಿವರಾಮ ಶರ್ಮ, ನಾಗರಾಜ ನಡುವಡ್ಕ ಹಾಗೂ ಬಿಜೆಪಿ ಜಿಲ್ಲಾ ಯುವಮೋರ್ಛಾ ಅಧ್ಯಕ್ಷ ಸಹಜ್ ರೈ ಬಳಜ್ಜ, ಭರತೇಶ್ ಮೂಡಾಯೂರು, ನಿವೃತ್ತ ಯೋಧ ಪ್ರವೀಣ್, ಕಾವು ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ಚಂದ್ರಶೇಖರ ಆಳ್ವ ಗಿರಿಮನೆ ಪಡುಮಲೆ, ಉತ್ತಮ್ ರೈ ಸಾಂತ್ಯ, ವಿನೋದ್ ರಾಜ್ ರೈ, ನಿವೃತ್ತ ಯೋಧರಾದ ಗಿರಿಧರ್ ಎನ್, ಸುಬ್ಬಪ್ಪ ಪಾಟಾಳಿ, ವಿದ್ಯಾಧರ್ ಎನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here