![](https://puttur.suddinews.com/wp-content/uploads/2024/02/3f4e8451-c168-4519-918d-7e8f7ebc0b09.jpg)
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ ವಿಷ್ಣುನಗರ ಕುಂಡಡ್ಕ ಇದರ ವತಿಯಿಂದ ನಡೆದ ನಗರ ಭಜನೆಯಲ್ಲಿ ಸಂಗ್ರಹವಾದ ಹಣ ಹಾಗೂ ಊರ ಪರವೂರ ದಾನಿಗಳ ಸಹಕಾರದಿಂದ ಸುಮಾರು 3.60ಲಕ್ಷ ರೂಪಾಯಿ ಮೌಲ್ಯದ ಅಡುಗೆ ಪಾತ್ರೆಗಳನ್ನು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವ ಅಧ್ಯಕ್ಷರಾದ ಕೃಷ್ಣಯ್ಯ.ಕೆ. ವಿಟ್ಲ ಅರಮನೆ ಹಾಗೂ ಆಡಳಿತ ಸಮಿತಿಯ ಅಧ್ಯಕ್ಷರು ವೇಣುಗೋಪಾಲ ಶೆಟ್ಟಿ ಮರುವಾಳ ಹಾಗೂ ಸಮಿತಿಯ ಸದಸ್ಯರು ಹಾಗೂ ಶ್ರೀ ವಿಷ್ಣುಮೂರ್ತಿ ಯುವಕ ವೃಂದದ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಅಧ್ಯಕ್ಷರಾದ ಮನೋಜ್ ಕಂಪ, ಕಾರ್ಯದರ್ಶಿ ಗಿರೀಶ್ ಹಡೀಲು ಸೇರಿದಂತೆ ವಿಷ್ಣುಮೂರ್ತಿ ಯುವಕ ವೃಂದದ ಸದಸ್ಯರು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/02/0a9b501a-98e6-458d-8e8d-5d7c20bd7f70.jpg)