ಉಪ್ಪಿನಂಗಡಿ: ಅರಣ್ಯ ಇಲಾಖೆಯ ನೆಡುತೋಪಿಗೆ ಬೆಂಕಿ

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಸಮೀಪದ ಸರ್ವೋದಯ ಪ್ರೌಢಶಾಲೆಗೆ ಹೋಗುವ ದಾರಿ ಬಳಿ ಅರಣ್ಯ ಇಲಾಖೆಯ ನೆಡುತೋಪು ಅರಣ್ಯದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ.


ಫೆ.14ರಂದು ಸಂಜೆ ಸುಮಾರು ಆರೂವರೆಯ ಸುಮಾರಿಗೆ ಅಕೇಶಿಯಾ ನೆಡುತೋಪು ಇರುವ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿಕೊಂಡು ಬೆಂಕಿಯನ್ನು ನಂದಿಸಿದರು.

LEAVE A REPLY

Please enter your comment!
Please enter your name here