ಇಡ್ಕಿದು ವಲಯ ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಭೆ

0

ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ವತಿಯಿಂದ ಫೆ.17ರಂದು ರಂದು ನಡೆಯುವ ರಾಜ್ಯ ಮಟ್ಟದ ಬ್ರಹತ್ ಕಾರ್ಯಕರ್ತರ ಸಮಾವೇಶವನ್ನು ಯಶಸ್ವಿಗೊಳಿಸುವ ಸಲುವಾಗಿ ಇಡ್ಕಿದು ವಲಯ ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನು ಮಿತ್ತೂರು ಅಕ್ಕರೆ ಸಾದಿಕ್ ರವರ ಮನೆಯಲ್ಲಿ ನಡೆಸಲಾಯಿತು. ಇಡ್ಕಿದು ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬೂತ್ ಅಧ್ಯಕ್ಷರುಗಳು ಕಾರ್ಯಪ್ರವೃತ್ತರಾಗುವಂತೆ ನಿರ್ಣಯ ಕೈಗೊಳ್ಳಲಾಯಿತು.


ಸಭೆಯ ನೇತೃತ್ವವನ್ನು ವಲಯಾದ್ಯಕ್ಷ ಅಬ್ದುಲ್ ನಾಸಿರ್ ಕೋಲ್ಪೆ ವಹಿಸಿದ್ದರು. ಬೂತ್ ಅಧ್ಯಕ್ಷರಾದ ಲಕ್ಷ್ಮಣ ಕುಲಾಲ್, ಹಂಝ ಖಂದಕ್, ಅಬ್ದುಲ್ ಲತೀಫ್ ದಲ್ಕಾಜೆ ಬೂತ್ ಪದಾಧಿಕಾರಿಗಳಾದ ಹಂಝ ಮಿತ್ತೂರು ,ಫಾರೂಕ್ ಮಣಿಯಾರ್, ಸಾದಿಕ್ ಅಕ್ಕರೆ,ಹಂಝ ಮೈಕೆ, ಸಿದ್ದೀಕ್ ಎಂ.ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here