ಫೆ.17:ಕುರಿಯ ಕಿನ್ನಿಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ

0

ಪುತ್ತೂರು: ತುಳುನಾಡಿನ ಉದ್ದಗಲಕ್ಕೂ ತಮ್ಮ ವೀರತ್ವವನ್ನು, ಕಾರಣಿಕವನ್ನು ಮೆರೆದ ವೀರ ಪುರುಷರಾದ ಕೋಟಿ-ಚೆನ್ನಯರಿಗೆ ಈ ನಾಡಿನ ಹಲವು ಕಡೆಗಳಲ್ಲಿ ಆರಾಧನಾ ಕ್ಷೇತ್ರಗಳಿವೆ. ಅವಳಿ ವೀರರು ಕೋಟಿ-ಚೆನ್ನಯರ ಇತಿಹಾಸದಲ್ಲಿ ತನ್ನದೇ ಆದ ಕಾರಣಿಕವನ್ನು ಮೆರೆದು ಭಕ್ತರನ್ನು ಸಲುಹಿಸಿದ ಗರಡಿಗಳಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಿನ್ನಿಮಜಲು ಅಗ್ರಪಂಕ್ತಿಯಲ್ಲಿದೆ. ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಪ್ರಶ್ನಾಚಿಂತನೆಯಂತೆ 22 ವರುಷಗಳ ಹಿಂದೆ ಪ್ರತಿಷ್ಟಾಪನೆಗೊಂಡ ಗರಡಿಯು ವರ್ಷಂಪ್ರತಿ ವಿಜ್ರಂಭಣೆಯಿಂದ ನೇಮೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದ್ದು, ಈ ಬಾರಿಯೂ ಫೆ.17ರಂದು ಕೀರ್ತಿಶೇಷ ಕೆ.ಗಿರಿಯಪ್ಪ ಪೂಜಾರಿಯವರ ಪತ್ನಿ ಮತ್ತು ಮಕ್ಕಳ ಆಡಳಿತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದ ನೇಮೋತ್ಸವವು ಮೂಡಿ ಬರಲಿದೆ.
ಬೆಳಿಗ್ಗೆ ಸ್ಥಳ ಶುದ್ಧಿ, ಪುಣ್ಯಾಹವಾಚನ, ಶ್ರೀ ಗಣಪತಿ ಹೋಮ, ಬ್ರಹ್ಮ ದೇವರ ತಂಬಿಲ, ಕೋಟಿ-ಚೆನ್ನಯರಿಗೆ ತಂಬಿಲ, ಸಾಯಂಕಾಲ ಭಂಡಾರ ತೆಗೆಯುವುದು, ರಾತ್ರಿ ಬೈದರ್ಕಳ ಗರಡಿ ಇಳಿಯುವುದು, ಮಾಯಾಂದಾಲ್(ಮಾಣಿಬಾಲೆ) ಗರಡಿ ಇಳಿಯುವುದು, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ, ಫೆ.18ರಂದು ಬೆಳಿಗ್ಗೆ ಕೋಟಿ-ಚೆನ್ನಯರ ದರ್ಶನ ಪಾತ್ರಿಗಳ ಸೇಟ್, ಬಳಿಕ ಬೈದೇರುಗಳ ಸೇಟ್ ಮತ್ತು ಅರುಣೋದಯಕ್ಕೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕುರಿಯ ಕಿನ್ನಿಮಜಲು ಗರಡಿ ಪ್ರಕಟಣೆ ತಿಳಿಸಿದೆ.

ಕಲಿಗದ ಮಾಯ್ಕರೆ ಪಂಜುರ್ಲಿ..
ರಾತ್ರಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ನಿರ್ದೇಶಿಸಿರುವ, ಜೆ.ಪಿ ತೂಮಿನಾಡು ಹಾಗೂ ಮೈಮ್ ರಾಮ್‌ದಾಸ್ ನಿರ್ದೇಶನದ, ಪ್ರವೀಣ್ ಕಣಿಯೂರು ಸಂಗೀತ, ಸಲಹೆ-ಸಹಕಾರ ಮನೀಶ್ ಶೆಟ್ಟಿ ಸಂಕಡ್ಕ, ಮುದ್ದು ಮೂಡುಬೆಳ್ಳೆ ಸಂಭಾಷಣೆಯ, ತುಳುನಾಡ ರಂಗ ಬೊಳ್ಳಿ ರವಿ ರಾಮಕುಂಜ, ತುಳುನಾಡ ರಂಗಭೂಷಣ ಪುಷ್ಪರಾಜ್ ಬೊಳ್ಳಾರ್, ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರು ಅಭಿನಯದ `ಕಲಿಗದ ಮಾಯ್ಕರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here