ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಕುಂಬ್ರ ಶಿವರಾಮ ರೈ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಶಿವರಾಮ ರೈ ಕಾಂಪ್ಲೆಕ್ಸ್ ಮಾಲಕ ಶಿವರಾಮ ರೈ ಕುಂಬ್ರ (61 ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಫೆ.15ರಂದು ನಿಧನರಾದರು. ಇವರು ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿ, ಕುಂಬ್ರ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿ, ಕುಂಬ್ರ ಸಿಎ ಬ್ಯಾಂಕ್‌ನ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ತಾ.ಪಂ.ಮಾಜಿ‌ ಸದಸ್ಯೆ ಸಾವಿತ್ರಿ, ಪುತ್ರ ಸ್ವಸ್ತಿಕ್, ಪುತ್ರಿ ಸುಷ್ಮಾ, ಸಹೋದರ ರಾಜರಾಮ್ ರೈ, ಸಹೋದರಿಯರಾದ ರುಕ್ಮಿಣಿ ರೈ, ಗಂಗಾರತ್ನ ರೈ, ಭಾರತಿ ರೈ , ಜಯಲಕ್ಷ್ಮೀ ರೈ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು. ಇಂದು ರಾತ್ರಿ 7 ಗಂಟೆಗೆ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here