ಬಾರ್ಯ ಗ್ರಾಮದೈವ ಪಂಜುರ್ಲಿ ಯಜಮಾನತ್ವ-ನೂರಿತ್ತಾಯ ಕುಟುಂಬದ ಭಾಸ್ಕರ ಬಾರ್ಯರಿಗೆ ಅಭಯ ನೀಡಿದ ದೈವ

0

ಪುತ್ತೂರು: ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್‌ನಿಂದ ವಾರ್ಷಿಕ ಜಾತ್ರೆ ಮತ್ತು ನೇಮೋತ್ಸವದಲ್ಲಿ ಗ್ರಾಮದೈವ ಪಂಜುರ್ಲಿಯ ಯಜಮಾನತ್ವವನ್ನು ತಂತ್ರಿಗಳು, ಪವಿತ್ರಪಾಣಿ, ಗುತ್ತಿನ ಮನೆಯವರು, ಆಡಳಿತ ಟ್ರಸ್ಟ್ ನ ಸದಸ್ಯರ, ನೂರಿತ್ತಾಯ ಕುಟುಂಬದ ಸದಸ್ಯರ, ಭಕ್ತಾದಿಗಳ ಸಮ್ಮುಖದಲ್ಲಿ ಪಂಜುರ್ಲಿ ದೈವವು ನೂರಿತ್ತಾಯ ಕುಟುಂಬದ ಭಾಸ್ಕರ ಬಾರ್ಯ ಇವರಿಗೆ ವಿಶೇಷವಾದ ಬಾಮ ಪ್ರಸಾದ ನೀಡುವ ಮೂಲಕ ಅಭಯ ನೀಡಲಾಗಿದೆ.

ಫೆ.6 ರಿಂದ 7ರ ತನಕ ಶ್ರೀ ದೇವರ ಉತ್ಸವ, ಮರುಳು ಜೂಮಾವತಿ, ಭದ್ರಕಾಳಿ, ಬೈರವ, ಬಾಲದುರ್ಗೆ, ಗ್ರಾಮದೈವ ಪಂಜುರ್ಲಿ ಹಾಗೂ ಕಲ್ಕುಡ ನೇಮೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದ ಬಳಿಕ ನೇಮೋತ್ಸವದಲ್ಲಿ ಗ್ರಾಮ ದೈವ ಪಂಜುರ್ಲಿ ಯಜಮಾನತ್ವವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here