ಕೌಡಿಚ್ಚಾರು:ಬೈಕ್-ಪಿಕಪ್ ಡಿಕ್ಕಿ: ಬೈಕ್ ಸವಾರ ಮೃತ್ಯು

0

ಕೌಡಿಚ್ಚಾರ್:ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಕೌಡಿಚ್ಚಾರು ಪಳ್ಳ ಎಂಬಲ್ಲಿ ಫೆ.15ರಂದು ನಡೆದಿದೆ.

ಅರಿಯಡ್ಕ ಗ್ರಾಮದ ಪಾಪೆಮಜಲು ಪಾದಲಾಡಿ ಸುಂದರ ಪೂಜಾರಿ (60ವ)ಎಂಬವರು ಮೃತಪಟ್ಟವರು.ಅವರು ಬೈಕ್‌ನಲ್ಲಿ ಕೌಡಿಚ್ಚಾರು ಮದಕ ಕಡೆ ಹೋಗುತ್ತಿದ್ದ ವೇಳೆ ಪಿಕಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಸುಂದರ ಪೂಜಾರಿ ಅವರು ತೀವ್ರ ಗಾಯಗೊಂಡಿದ್ದು,ಅವರನ್ನು ಸಂದೀಪ ಎಂಬವರ ಆಟೋ ರಿಕ್ಷಾದಲ್ಲಿ ಪುತ್ತೂರು ಧನ್ವಂತರಿ ಆಸ್ಪತ್ರೆಗೆ ದಾಖಲಿಸಿದ್ದರು.ಅಲ್ಲಿ ಸುಂದರ ಪೂಜಾರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಶವಾಗಾರ ಕೊಠಡಿಯಲ್ಲಿ ಇರಿಸಲಾಗಿದೆ.ಮೃತರು ಪತ್ನಿ ಸೀತಾ, ಪುತ್ರರಾದ ರವಿರಾಜ್, ಪ್ರವೀಣ್, ಪುತ್ರಿ ಸೌಮ್ಯ,ಅಳಿಯ ಶಶಿಧರ,ಮೊಮ್ಮಕ್ಕಳನ್ನು ಅಗಲಿದ್ದಾರೆ.ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

– ನಾಳೆ ಇರುತ್ತೇವೋ ಇಲ್ಲವೋ…?  ಮೃತ ಸುಂದರ ಪೂಜಾರಿಯವರು ಫೆ.14ರಂದು ಕೌಡಿಚ್ಚಾರ್‌ನ ಅಂಗಡಿಯೊಂದರಲ್ಲಿ ದೊಡ್ಡ ಹರಿವೆಯೊಂದನ್ನು ಖರೀದಿ ಮಾಡಿ ಅಲ್ಲೇ ಇದ್ದವರೊಂದಿಗೆ ಮಾತನಾಡುತ್ತಾ, ದರ್ಬೆತಡ್ಕ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರು ಇವತ್ತು ತೀರಿ ಹೋದರು.ನಾವೂ ನಾಳೆ ಇರುತ್ತೇವೆಯೋ ಇಲ್ಲವೋ ಯಾರಿಗೆ ಗೊತ್ತು.ಆದ ಕಾರಣ ಇವತ್ತೇ ಹರಿವೆಯನ್ನು ಪದಾರ್ಥ ಮಾಡಿ ತಿನ್ನೋದುೞ ಎಂದು ಹೇಳಿದ್ದರು.ಅವರ ಮಾತನ್ನು ಕೇಳಿಸಿಕೊಂಡಿದ್ದ ಸ್ಥಳೀಯ ವ್ಯಕ್ತಿ ಇಂದು ಬೇಸರದಿಂದಲೇ ಈ ವಿಚಾರ ಹೇಳಿದ್ದಾರೆ.

LEAVE A REPLY

Please enter your comment!
Please enter your name here