ಉಪ್ಪಿನಂಗಡಿ: ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ನಿಧನ

0

ಉಪ್ಪಿನಂಗಡಿ: ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರ್ವೇಲಿನ ಸಾದತ್ ಅಲಿ ತಂಙಳ್ ಚಿಕಿತ್ಸೆ ಫಲಕಾರಿಯಾಗದೇ ಫೆ.16 ರಂದು ನಿಧನರಾಗಿದ್ದಾರೆ. ಸಾದತ್ ಅಲಿ ತಂಙಳ್ ಅವರು ಕಳೆದ ಫೆ.5 ರಂದು ಅಟೋ ರಿಕ್ಷಾದಲ್ಲಿ ಪುತ್ತೂರು ಕಡೆ ಪ್ರಯಾಣಿಸುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾ ಶಾಂತಿನಗರ ಎಂಬಲ್ಲಿ ಮಗುಚಿ ಬಿದ್ದಿತ್ತು. ಗಂಭೀರ ಗಾಯಗೊಂಡ ಸಾದತ್ ಅಲಿ ತಂಙಳ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.


ಒಂದೇ ಕುಟುಂಬದಲ್ಲಿ ಎರಡು ಮರಣ: ಸಾದತ್ ಅಲಿ ತಂಙಳ್ ಅವರ ಸಹೋದರಿಯ ಮಗಳು ಹೃದಯಾಘಾತದಿಂದ ನಿನ್ನೆ ಮೃತಪಟ್ಟಿದ್ದಳು. ಇಂದು ಸಾದತ್ ಅಲಿ ಅವರ ಮೃತ ಪಡುವ ಮೂಲಕ ಒಂದೇ ಕುಟುಂಬಕ್ಕೆ ಎರಡು ಮರಣ ಬರಸಿಡಿಲಿನಂತೆ ಬಂದೆರಗಿದೆ.

LEAVE A REPLY

Please enter your comment!
Please enter your name here