ನೆಲ್ಯಾಡಿ: ಜೆಸಿಐ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಮೆಸ್ಕಾಂ ಜೆಇ ರಮೇಶ್-ಸನ್ಮಾನ

0

ನೆಲ್ಯಾಡಿ: ಮೆಸ್ಕಾಂ ನೆಲ್ಯಾಡಿ ಶಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಳೆದ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಿ.,ಅವರು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ನೆಲ್ಯಾಡಿ ಜೆಸಿಐ ವತಿಯಿಂದ ’ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಎಂದು ಗುರುತಿಸಿ ಸನ್ಮಾನಿಸಲಾಯಿತು.


ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಸುಚಿತ್ರಾ ಜೆ ಬಂಟ್ರಿಯಾಲ್, ಪೂರ್ವಾಧ್ಯಕ್ಷರಾದ ದಯಾಕರ ರೈ ಕೆ.ಯಂ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಪೂರ್ವಾಧ್ಯಕ್ಷರಾದ ರವೀಂದ್ರ ಟಿ, ಜಯಾನಂದ ಬಂಟ್ರಿಯಾಲ್, ದಯಾನಂದ ಆದರ್ಶ, ಶಿವಪ್ರಸಾದ್, ಸತೀಶ್ ಭಟ್ ಕೆ.ಎಸ್.ದುರ್ಗಾಶ್ರೀ, ಪವರ್‌ಮ್ಯಾನ್‌ಗಳಾದ ರಮೇಶ ಅರಕೇರಿ, ವಿಠಲ್ ಭಜಂತ್ರಿ, ಶೀಲಾವತಿ ಎಂ.ಕೆ., ಮೈಹಿಬೂಬು ಮೊದಲಾದವರು ಉಪಸ್ಥಿತರಿದ್ದರು. ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಸುಚಿತ್ರಾ ಜೆ ಬಂಟ್ರಿಯಾಲ್ ಸ್ವಾಗತಿಸಿದರು. ಶಿವಪ್ರಸಾದ್ ವಂದಿಸಿದರು. ರವೀಂದ್ರ ಟಿ.ನಿರೂಪಿಸಿದರು.

LEAVE A REPLY

Please enter your comment!
Please enter your name here