ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯು ಮಾ.6 ರಿಂದ ಮಾ.13 ರವರೆಗೆ ಮತ್ತು ಮಾ.14ರಂದು ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ.17 ರಂದು ದೇವಸ್ಥಾನದಲ್ಲಿ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೂಜಿಬೈಲು, ಕೋಶಾಧಿಕಾರಿ ದೀಪಕ್ ಕುಮಾರ್ ಮುಂಡ್ಯ, ಉಪಾಧ್ಯಕ್ಷರುಗಳಾದ ಸದಾಶಿವ ರೈ ನಡುಬೈಲು, ಜೋತೆ ಕಾರ್ಯದರ್ಶಿಗಳಾದ ವಿಕ್ರಂ ರೈ ಸಾಂತ್ಯ, ನಾರಾಯಣ ರೈ ಅಂಕೊತ್ತಿಮಾರ್, ಜಾತ್ರೋತ್ಸವ ಮಿತಿಯ ಸದಸ್ಯರುಗಳಾದ ಗಿರೀಶ್ ರೈ ಮರಕ್ಕಡ, ರಾಮಣ್ಣ ನಾಯ್ಕ, ಆನಂದ ಗೌಡ ಕೆಮ್ಮತ್ತಡ್ಕ, ಅಪ್ಪಕುಂಞಿ ಮಣಿಯಾಣಿ, ಅಚ್ಚುತ ಮಣಿಯಾಣಿ ಸಾಂತ್ಯ, ಶ್ರೀನಿವಾಸ ಹಿರಿಯಾಣ, ಗೋಪಾಲಕೃಷ್ಣ ಚಿಮಿಣಿಗುಡ್ಡೆ, ಶಂಕರ ಪಟ್ರೋಡಿ, ಅಣ್ಣಯ್ಯ ಗೌಡ ಉರಿಕ್ಯಾಡಿ ಮೋಹನ್ ನಾಯಾರ್, ಜಯಾನಂದ ಕೋರಿಗದ್ದೆ ಮತ್ತು ಗಣೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here