ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಸಭೆ

0

ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಸಮಿತಿ ಸಭೆಯು ಸಭಿತಾ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ಬಂಟರ ಭವನದಲ್ಲಿ ಜರಗಿತು. ಸಭಿತಾ ಭಂಡಾರಿರವರು ಮಾತನಾಡಿ‌ ಮಾ.10 ರಂದು ನಡೆಯುವ ಮಹಿಳಾ ದಿನಾಚರಣೆಯ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವುದರ ಬಗ್ಗೆ ಕೂಡ ತಿಳಿಸಿ, ಅದೇ ರೀತಿಯಲ್ಲಿ ಮೂರು ಮಂದಿ‌ ಮಹಿಳಾ ಸಾಧಕೀಯರನ್ನು ಸನ್ಮಾನ ಮಾಡುವುದಾಗಿಯೂ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡುವುದಕ್ಕೆ ಒಬ್ಬ ಸಂಪನ್ಮೂಲ ವ್ಯಕ್ತಿಯನ್ನು ಕರೆಸುವುದಾಗಿಯೂ ಎಲ್ಲರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು. ಅದೇ ರೀತಿ ಆರ್ಥಿಕ ಸಂಕಷ್ಟದಲ್ಲಿರುವ ಎರಡು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ನೀಡುವಂತೆ ನಮ್ಮ ಸಮುದಾಯದ ಎಲ್ಲಾ ಬಂಟ ಬಂಧುಗಳು ಸಹಕರಿಸುವಂತೆ ವಿನಂತಿಸಿದರು.

ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿದರು, ಕೋಶಾಧಿಕಾರಿ ವಾಣಿ ಎಸ್ ಶೆಟ್ಟಿ ವಂದಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಗೀತಾ ಮೋಹನ್ ರೈ, ಜಯಂತಿ ಎಂ ರೈ, ಕುಸುಮ ಪಿ ಶೆಟ್ಟಿ, ಸ್ವರ್ಣಲತಾ ಜೆ. ರೈ, ಅನುಶ್ರೀ ಬಿ ಶೆಟ್ಟಿ, ಜತೆಕಾರ್ಯದರ್ಶಿಗಳಾದ ಅಮಿತಾ ಎಸ್ ಶೆಟ್ಟಿ, ಕೃಷ್ಣವೇಣಿ ಕೆ ರೈ, ದೀಪ್ತಿ ಆರ್ ರೈ, ಶಿಲ್ಪ ಎಚ್‌ ರೈ ನಿರ್ದೇಶಕರುಗಳಾದ ಲಾವಣ್ಯ ನಾಯ್ಕ್, ವತ್ಸಲಾ ಪಿ. ಶೆಟ್ಟಿ, ರೂಪರೇಖ ಆಳ್ವ, ಧನ್ಯಾ ಶೆಟ್ಟಿ, ರಾಜೀವಿ ಶೆಟ್ಟಿ, ಕಿರಣಾ ರೈ, ಸುಜಾತ ಎಸ್ ರೈ, ಗೀತಾ ಡಿ ರೈ, ಶಕುಂತಲಾ ವಿ ಕೆ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here