ಫೆ.23: ಕುಂಬ್ರದಲ್ಲಿ ಜನೌಷಧಿ ಶುಭಾರಂಭ

0

ಪುತ್ತೂರು: ಕುಂಬ್ರ ಸುವರ್ಣ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಜನೌಷಧಿ ಫೆ.23ರಂದು ಶುಭಾರಂಭಗೊಳ್ಳಲಿದೆ. ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟನೆಗೊಳಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ನರಿಮೊಗರು ಪ್ರಸಾದಿನೀ ಆಯುರ್‌ನಿಕೇತನದ ಆಯುರ್ವೇದ ತಜ್ಞವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕಟ್ಟಡದ ಮಾಲಕಿ ಕೆ.ಎನ್. ಸುವರ್ಣಲತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೇಷ್ಠ ಗುಣಮಟ್ಟದ 1759ಕ್ಕೂ ಹೆಚ್ಚು ಔಷಧಗಳಿವೆ ಎಂದು ಮಾಲಕರಾದ ಶೀಲಾ ಜಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here