ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಗ್ರಾಮಸ್ಥರಿಂದ ಪೂರ್ವಭಾವಿ ಸಭೆ

0

ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.2 ಮತ್ತು ಎ.3ರಂದು ನಡೆಯಲಿರುವ ಅಂಗವಾಗಿ ಪೂರ್ವಭಾವಿ ಸಭೆಯು ವ್ಯವಸ್ಥಾಪನಾ ಸಮಿತಿ ಮತ್ತು ಗ್ರಾಮದ ಭಕ್ತರ ಸಮ್ಮುಖದಲ್ಲಿ ಫೆ.25ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಲ್ಪಾಡಿ, ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಸುಬ್ರಹ್ಮಣ್ಯ ಹೆಬ್ಬಾರ್ ಸೇರಾಜೆ, ಉದಯ ಶಂಕರ್ ಭಟ್, ನಾಗೇಶ್ ಸರಕಾರೆ, ಹರೀಶ್ ಕೈಂದಾಡಿ, ಬಾಬು ಗೌಡ ಕೈಂದಾಡಿ, ವಿಶ್ವನಾಥ ಬಲ್ಯಾಯ ಮುಂಡೋಡಿ, ಬಾಲಕೃಷ್ಣ ಗೌಡ ತೋಟ, ದೇವರಾಜ್ ಗೌಡ ಕಲ್ಕಾರ್, ಜತ್ತಪ್ಪ ಗೌಡ ಕೈಂದಾಡಿ, ಕುಶಾಲಪ್ಪ ಗೌಡ, ಕೃಷ್ಣ ಸಾಲ್ಯಾನ್, ವಿನೋದ್ ಕುರ್ಪುತಮೂಳೆ, ಕೃಷ್ಣಪ್ಪ ಪೂಜಾರಿ ಕೈಂದಾಡಿ, ಮೋಹನ್ ಗೌಡ ಪಾದೆ ಶಾಂತಿಗೋಡು, ಎಸ್.ಪಿ ನಾರಾಯಣ ಗೌಡ ಪಾದೆ, ಶಿವಪ್ರಸಾದ್ ಕೈಂದಾಡಿ, ಆನಂದ ಬೊಲ್ಲಮೆ, ವಿನೋದ್ ಓಲಾಡಿ, ವರುಣ್ ಓಲಾಡಿ ಹಾಗೂ ಊರವರು ಭಕ್ತರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here