ಫೆ.29: ಕಲ್ಪತಬೈಲು ಶಾಲಾ ಮುಖ್ಯಶಿಕ್ಷಕ ಗಂಗಾಧರ ಪಿ. ನಿವೃತ್ತಿ

0

ಪುತ್ತೂರು: ಕೊಡಿಯಾಲ ಗ್ರಾಮದ ಕಲ್ಪತಬೈಲು ಶಾಲಾ ಮುಖ್ಯ ಶಿಕ್ಷಕ ಗಂಗಾಧರ ಪಿ ಎಂಬವರು ಫೆ.29ರಂದು ಸೇವಾ ನಿವೃತ್ತರಾಗಲಿದ್ದಾರೆ.1997ರಲ್ಲಿ ಮುರುಳ್ಯದ ಕಾಯರ್ತಡ್ಕ ಕಿ.ಪ್ರಾ ಶಾಲೆಯಲ್ಲಿ ಶಿಕ್ಷಕರಾಗಿ ಸರಕಾರಿ ಸೇವೆ ಆರಂಭಿಸಿದ ಇವರು,2012ರಲ್ಲಿ ಕಲ್ಪತಬೈಲು ಶಾಲೆಗೆ ವರ್ಗಾವಣೆಗೊಂಡರು.ಸುಮಾರು 27ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಪುತ್ತೂರು ತಾಲೂಕು ಭಕ್ತಕೋಡಿ ನಿವಾಸಿಯಾಗಿರುವ ಗಂಗಾಧರರ ಪತ್ನಿ ಶ್ರೀಮತಿ ವೇದಾವತಿಯವರು ಬೆಳಂದೂರು ಹಿ.ಪ್ರಾ ಶಾಲೆಯ ಶಿಕ್ಷಕಿಯಾಗಿದ್ದಾರೆ.ಪುತ್ರ ಅಖಿಲ್‌ ಪಿ, ಎಂ ಬಿ ಎ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಉದ್ಯೋಗದಲ್ಲಿದ್ದಾರೆ. ಇನ್ನೋರ್ವ ಪುತ್ರ ಪ್ರಜ್ವಲ್‌ ಪಿ ಸಹ್ಯಾದ್ರಿ ವಿದ್ಯಾಸಂಸ್ಥೆಯಲ್ಲಿ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here