ಫೆ.29:ಕುಡಿಪಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಮುಖ್ಯಗುರು ಚಂದ್ರಪ್ರಭಾ ಎಸ್ ಸೇವಾ ನಿವೃತ್ತಿ

0

ಪುತ್ತೂರು: ಕುಡಿಪಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಮುಖ್ಯಗುರು ಚಂದ್ರಪ್ರಭಾ ಎಸ್.ರವರು ಫೆ.29 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಯು.ಎಸ್ ಭಾಸ್ಕರ ಆಚಾರ್ಯ ಹಾಗೂ ಎಂ.ಡಿ ಶಕುಂತಳಾ ದಂಪತಿ ಪುತ್ರಿಯಾಗಿ ಫೆಬ್ರವರಿ 22, 1964ರಂದು ಜನಿಸಿದ ಚಂದ್ರಪ್ರಭಾ ಎಸ್.ರವರು ತಮ್ಮ ಟಿಸಿಎಚ್ ಶಿಕ್ಷಣವನ್ನು ಕಿನ್ನಿಕಂಬಳದಲ್ಲಿ ಪೂರೈಸಿ 1994, ಜುಲೈ 28 ರಂದು ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿರುತ್ತಾರೆ. ಬಳಿಕ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಸರ್ವೆ ಕಲ್ಪನೆ, ಮುಕ್ವೆ, ಮುರ, ಉಪ್ಪಿನಂಗಡಿ, ಪರ್ಲಡ್ಕ ಇಲ್ಲಿ ಸೇವೆಯನ್ನು ಸಲ್ಲಿಸಿ 2022, ಎಪ್ರಿಲ್ 30ರಂದು ಕುಡಿಪಾಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಕರ್ತವ್ಯವನ್ನು ಮುಂದುವರೆಸಿದ್ದರು. ಪ್ರಸ್ತುತ ಇವರು ಪತಿ ನಿವೃತ್ತ ಸೈನಿಕ ಸುರೇಶ್, ಪುತ್ರರಾದ ಮನೀಶ್, ಮನ್ವಿತ್‌ರವರೊಂದಿಗೆ ನೆಹರುನಗರದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here