ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನರಿಮೊಗರು: ಇಲ್ಲಿನ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾ.15, 16ರಂದು ನಡೆಯಲಿರುವ ಸಾರ್ವಜನಿಕ ಮಹಾಮೃತ್ಯುಂಜಯ ಹೋಮ, ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಫೆ.29ರಂದು ಶ್ರೀದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.


ಪ್ರಧಾನ ಅರ್ಚಕ ರಮೇಶ ಬೈಪಡಿತ್ತಾಯರವರು ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರೆಮನೆ ಲೋಕಪ್ಪ ಗೌಡರು ಪ್ರಮುಖರಿಗೆ ಆಮಂತ್ರಣ ಪತ್ರಿಕೆಯನ್ನು ವಿದ್ಯುಕ್ತವಾಗಿ ವಿತರಿಸಿದರು. ಅರ್ಚಕ ಯರ್ಮುಂಜ ಗೋಪಾಲಕೃಷ್ಣ ಭಟ್, ಸಹಾಯಕ ಅರ್ಚಕ ಜಯಪ್ರಕಾಶ್ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕುತ್ತಿಗದ್ದೆ ಜನಾರ್ದನ ಜೋಯಿಸ, ವೇದಾವತಿ ಬಾಳಪ್ಪ ಗೌಡ ಕೆದ್ಕಾರು, ಮಾಜಿ ಸದಸ್ಯ ಜಯಾನಂದ ಆಳ್ವ, ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್ ಇಂದಿರಾನಗರ, ತಾ.ಪಂ ಮಾಜಿ ಸದಸ್ಯೆ ಯಶೋಧಾ ಕೆ. ಗೌಡ, ಪ್ರಮುಖರಾದ ಶ್ರೀರಂಗ ಶಾಸ್ತ್ರಿ ಮಣಿಲ, ರಮೇಶ್ ಗೌಡ ಪಜಿಮಣ್ಣು, ಉಮೇಶ್ ಕಡ್ಯ, ಪದ್ಮಯ್ಯ ಕಡ್ಯ, ತಿಮ್ಮಪ್ಪ ಗೌಡ ನಡುಬೈಲು, ಚಂದ್ರಶೇಖರ ಕುರೆಮಜಲು, ನೀಲಪ್ಪ ಪೂಜಾರಿ ಕುರೆಮಜಲು, ಅಣ್ಣಿ ಪೂಜಾರಿ ಹಿಂದಾರು, ಮೋನಪ್ಪ ಗೌಡ ನಡುಬೈಲು, ಜಗದೀಶ ಜೋಗಿ ನರಿಮೊಗರು, ಸಿಬ್ಬಂದಿಗಳಾದ ವಿಜಿತ್, ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here