ಆಲಂಕಾರಿನಲ್ಲಿ ಬಿ.ಜೆ.ಪಿ ಕೊಯಿಲ ಮಹಾಶಕ್ತಿ ಕೇಂದ್ರದ ಸಭೆ,ಸನ್ಮಾನ ಕಾರ್ಯಕ್ರಮ

0

ಆಲಂಕಾರು: ಬಿ.ಜೆ.ಪಿ ಸುಳ್ಯಮಂಡಲ ಕೊಯಿಲ ಮಹಾಶಕ್ತಿಕೇಂದ್ರದ ಸಭೆಯು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸುಳ್ಯಮಂಡಲ ಬಿ.ಜೆ.ಪಿ ಅಧ್ಯಕ್ಷ ವೆಂಕಟ್ ವಳಲಂಬೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಲೋಕಸಭಾ ಕ್ಷೇತ್ರದ ಫಲಾನುಭವಿ ಆಭಿಯಾನದ ಸಂಚಾಲಕಿ ಆಶಾತಿಮ್ಮಪ್ಪ ಗೌಡ ಕೇಂದ್ರ ಸರಕಾರದ ಫಲಾನುಭವಿಗಳ ಸಂಪರ್ಕ ಅಭಿಯಾನದ ಕುರಿತು ಮಾಹಿತಿ ನೀಡಿದರು.ಮಂಡಲ ಪ್ರದಾನ ಕಾರ್ಯದರ್ಶಿ ವಿನಯ ಕಂದಡ್ಕ ಬಿ.ಜೆ.ಪಿ ಸರಳ್ ಆಯಪು ನ ಕುರಿತು ಮಾಹಿತಿ ನೀಡಿ ಮೊಬೈಲ್ ನಲ್ಲಿ ಸರಳ್ ಅಪ್ ನ್ನು ಇನ್ ಸ್ಟಾಟಲ್ ಮಾಡಿ ಕೇಂದ್ರ ಸರಕಾರದ ಜನಪರ ಯೋಜನೆ ಹಾಗು ನರೇಂದ್ರ ಮೋದಿಜೀಯವರ ಕಾರ್ಯವೈಖರಿಯನ್ನು ಇನ್ನಷ್ಟು ಪ್ರಚಾರ ಮಾಡುವಂತೆ ತಿಳಿಸಿದರು.

ಸುಳ್ಯ ಮಂಡಲದ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಸುಳ್ಯ ಮಂಡಲದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಸಕ್ತ ದ.ಕ ಜಿಲ್ಲಾ ಬಿ ಜೆ ಪಿ ಯ ನೂತನ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರನ್ನು ಕೊಯಿಲ ಮಹಾಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.


ಜಿಲ್ಲಾ ಎಸ್ ಟಿ ಮೋರ್ಚದ ಪ್ರಧಾನ ಕಾರ್ಯದರ್ಶಿಯಾದ ಪೂವಪ್ಪ ನಾಯ್ಕ ಶಾಂತಿಗುರಿ ಕಾರ್ಯಕ್ರಮ ‌ನಿರೂಪಿಸಿ,ಮಂಡಲ ಪ್ರದಾನ ಕಾರ್ಯದರ್ಶಿ, ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ,ಕೊಯಿಲ ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ಸುರೇಶ್ ದೇಂತಾರು ವಂದಿಸಿದರು. ವೇದಿಕೆಯಲ್ಲಿ ಆಲಂಕಾರು ಸಿ ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ್ ರಾವ್ ಕಜೆ ,ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಲಾಲು, ಸುಳ್ಯ ಮಂಡಲ ಉಪಾಧ್ಯಕ್ಷ ಆರ್ ಕೆ ಭಟ್ ಬೆಳ್ಳಾರೆ,ಮಂಡಲ ಕಾರ್ಯದರ್ಶಿಗಳಾದ ಶಿವ ಪ್ರಸಾದ್ ನಡುತೋಟ , ತೇಜಸ್ವಿನಿ ಕಟ್ಟಪುಣಿ , ಕೊಯಿಲ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಶಕ್ತಿಕೇಂದ್ರಗಳ ಪ್ರಮುಖರುಗಳು,ಬೂತ್ ಸಮಿತಿಯ ಅಧ್ಯಕ್ಷರುಗಳು,ಗ್ರಾಮ ಪಂಚಾಯತ್ ಅಧ್ಯಕ್ಷರುಗಳು,ಉಪಾಧಕ್ಷರುಗಳು ಹಾಗೂ ಸದಸ್ಯರುಗಳು,ಬಿ.ಜೆ.ಪಿ ಅನ್ಯೋನ್ಯ ಜವಾಬ್ದಾರಿ ಇರುವ ,ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here