ಪುತ್ತೂರು: ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ಈ ತಂಡದ ನೂತನ ತುಳು ಹಾಸ್ಯಮಯ ಸಾಮಾಜಿಕ ನಾಟಕದ ಶುಭ ಮುಹೂರ್ತ ಮುಕ್ವೆ ಮಜಲುಮಾರು ಉಮಾಮಹೇಶ್ವರ ದೇವಸ್ಥಾನಲ್ಲಿ ನಡೆಯಿತು.
ಕಲಾವಿದ ರವಿಶಂಕರ ಶಾಸ್ತ್ರಿ ಮಣಿಲ ರಚಿಸಿದ ’ತತ್ತ್ಂಡ ಮಿತ್ತ್ ಉಂಡು’ ತುಳು ಹಾಸ್ಯಮಯ ಸಾಮಾಜಿಕ ನಾಟಕ ಇದಾಗಿದ್ದು. ಪ್ರೇಕ್ಷಕರನ್ನು ನಕ್ಕು ನಗಿಸಲು ಹೊಸ ಪ್ರಯೋಗವಾಗಿದೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕರಾದ ಕಾರ್ತಿಕ್ ಶಾಸ್ತ್ರಿ ಮಣಿಲ, ಸಾರಥ್ಯ ಗಣೇಶ್ ಪೂಜಾರಿ ಮತ್ತು ನಿರ್ಮಾಣ ರೋಹಿತ್ ಕೋಟ್ಯಾನ್ ಶಿಬರ ಹಾಗೂ ತಂಡದ ಎಲ್ಲಾ ಕಲಾವಿದರು ಭಾಗವಹಿಸಿದರು. ಹಾಗೆ ಕಥಾ ಸಾರಾಂಶವನ್ನು ಕಲಾವಿದರಿಗೆ ವಿವರಿಸಿದರು. ’ಕುಡ ಒಂಜಾಕ’ ನಾಟಕ ಕಳೆದ ಬಾರಿ ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೊಂದು ಹೊಸ ನಾಟಕದ ಮೂಲಕ ಕಲಾವಿದರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರ ವಹಿಸಲಿದೆ.