ಸವಣೂರು: ವಂತಿಗೆಯ ವಿಚಾರದಲ್ಲಿ ಮಸೀದಿ ಬಳಿಯಲ್ಲಿ ವ್ಯಕ್ತಿಗೆ ಹಲ್ಲೆ ,ಜೀವ ಬೆದರಿಕೆ-ಪ್ರಕರಣ ದಾಖಲು

0

ಸವಣೂರು: ವ್ಯಕ್ತಿಯೋರ್ವರಿಗೆ ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು, ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಸವಣೂರು ಮಸೀದಿಯ ಬಳಿ ನಡೆದಿರುವ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ಅಬ್ದುಲ್ ಗಫೂರ್ (45) ಎಂಬವರು ದೂರು ನೀಡಿದವರು ಮಧ್ಯಾಹ್ನ ಸವಣೂರು ಮಸೀದಿಯ ಬಳಿ ತನ್ನ ಪರಿಚಯದ ಮಹಮ್ಮದ್ ಎಂಬರೊಂದಿಗೆ ಮಾತನಾಡುತ್ತಿದ್ದಾಗ, ಹಸೈನಾರ್, ಬಂದು ವಂತಿಗೆಯ ವಿಚಾರದಲ್ಲಿ ತಕರಾರು ತೆಗೆದು, ಬೈದು, ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಣ್ಣ ಅಬ್ದುಲ್ ರಜಾಕ್ ಮತ್ತು ಇತರರು ಬಂದಿದ್ದು, ಈ ವೇಳೆ ಆರೋಪಿ ಹಸೈನಾರ್ ನನ್ನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುವುದಾಗಿ ಅಬ್ದುಲ್ ಗಫೂರ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here