ಎಸ್ಕೆಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ: ವಿಖಾಯ ಚೇರ್‌ಮೆನ್ ಆಗಿ ಬಾತಿಶಾ ಆತೂರು ಆಯ್ಕೆ

0

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ವಿಖಾಯ ಚೇರ್‌ಮೆನ್ ಆಗಿ ಇಬ್ರಾಹಿಂ ಬಾತಿಶಾ ಆತೂರು ಆಯ್ಕೆಯಾಗಿದ್ದಾರೆ.
ಬಾತಿಶಾ ಅವರು ಪ್ರಸ್ತುತ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಪುತ್ತೂರು ಇದರ ಅಧ್ಯಕ್ಷರಾಗಿ, ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ಇದರ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಕಡಬ ತಾಲೂಕು ಉಪಾದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಎನ್‌ಎಸ್‌ಯುಐ ಪುತ್ತೂರು ತಾಲೂಕು ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಎಸ್ಕೆಎಸ್ಸೆಸ್ಸೆಫ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಅನೇಕ ಸಂಘ ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಆತೂರು ಬೈಲ್ ಮದ್ರಸದ ಮಾಜಿ ಅಧ್ಯಕ್ಷ ಡಿ ಎ ಪುತ್ತುಮೋನು ಹಾಗೂ ಡಿ.ಎ ಶಹನಾಝ್‌ರವರ ಪುತ್ರ.

LEAVE A REPLY

Please enter your comment!
Please enter your name here