ಸುಬ್ರಹ್ಮಣ್ಯ ಸಮೀಪ ಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಕಾಡಾನೆ

0

ಪುತ್ತೂರು: ಕಾಡಾನೆಯೊಂದು ಶಾಲಾ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಎಂಬಲ್ಲಿ ಮಾ.6ರ ಸಂಜೆ ನಡೆದಿದೆ.

ಸುಬ್ರಹ್ಮಣ್ಯ – ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಕಡಬ ತಾಲೂಕಿನ ಐನೆಕಿದು ಶಾಲಾ ಬಳಿ ಕಾಡಾನೆಯೊಂದು ಸಂಜೆ ಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ದಾಟಿದೆ. ಕಾಡಾನೆ ರಸ್ತೆ ದಾಟುತ್ತಿರುವುದನ್ನು ವ್ಯಕ್ತಿಯೊಬ್ಬರು ವಿಡಿಯೋ ಚಿತ್ರಿಸಿದ್ದಾರೆ.

ಘಟನೆಯಿಂದ ಆ ಭಾಗದ ಜನತೆ ಆತಂಕಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

LEAVE A REPLY

Please enter your comment!
Please enter your name here