ಕಡಮಜಲು ಸುಭಾಸ್ ರೈ ರವರಿಂದ ಗುರು ರಾಮಕೃಷ್ಣ ಬಿ. ರವರಿಗೆ ಸನ್ಮಾನ

0

ಪುತ್ತೂರು: ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪಾಲ್ತಾಡಿ ಗ್ರಾಮದ ಪೆಳತ್ತಡ್ಕ ರಾಮಕೃಷ್ಣ ಬಿ. ರವರಿಗೆ ಅವರ ಮನೆಯಲ್ಲಿ ಅವರ ಶಿಷ್ಯ ಕಡಮಜಲು ಸುಭಾಸ್ ರೈಯವರು ಮಾ. 4 ರಂದು ಗುರು ಸನ್ಮಾನ ಮಾಡಿದರು. ಈ ವೇಳೆ ಸನ್ಮಾನಿತರ ಪತ್ನಿ ಸರಸ್ವತೀ, ಪುತ್ರ ಸುಬ್ರಹ್ಮಣ್ಯ, ಸೊಸೆ ಸೌಮ್ಯ ಮತ್ತು ಪ್ರೀತಿ ಸುಭಾಸ್ ರೈ ಉಪಸ್ಥಿತರಿದ್ದರು.


1969-70 ರಲ್ಲಿ ಕಡಮಜಲು ಸುಭಾಸ್ ರೈಯವರು ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ರಾಮಕೃಷ್ಣ ಬಿ. ರವರು ಇಂಗ್ಲೀಷ್ ಉಪನ್ಯಾಸಕರಾಗಿದ್ದರು. 24 ವರ್ಷಗಳ ಬಳಿಕ ಗುರುವನ್ನು ಭೇಟಿ ಮಾಡಿ ಸನ್ಮಾನಿಸುತ್ತಿರುವುದಕ್ಕೆ ಸುಭಾಸ್ ರೈ ಸಂತಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here