ಗೋಕುಲನಗರ: ಸಾರ್ವಜನಿಕ ಬಳಕೆಯ ನಲ್ಲಿ ನೀರು ಸ್ಥಗಿತಕ್ಕೆ ಅಸಮಾಧಾನ-ಮತ್ತೆ ಪುನರಾರಂಭಕ್ಕೆ ಗ್ರಾ.ಪಂ.ಗೆ ಮನವಿ

0

ಕಡಬ: ಕೊಯಿಲ ಗ್ರಾಮದ ಗೋಕುಲನಗರದಲ್ಲಿ ಹಲವು ವರ್ಷಗಳಿಂದ ಬಳಕೆಯಲ್ಲಿದ್ದ ನಲ್ಲಿ ನೀರು ಸ್ಥಗಿತಗೊಳಿಸಿರುವುದಕ್ಕೆ ಗ್ರಾಮಸ್ಥರಿಂದ ಅಸಮಾಧಾನ ವ್ಯಕ್ತಗೊಂಡಿದ್ದು ಮತ್ತೆ ಪುನರಾರಂಭಕ್ಕೆ ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.


ಕೊಯಿಲ ಗ್ರಾಮದ 1ನೇ ವಾರ್ಡ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಬಳಿಯ ಗೋಕುಲನಗರದಲ್ಲಿ ದಶಕಗಳಿಂದ ಸಾರ್ವಜನಿಕ ಬಳಕೆಯಲ್ಲಿದ್ದ ನಲ್ಲಿ ನೀರು ದುರುಪಯೋಗ ಆಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಗಿತಗೊಳಿಸಲಾಗಿತ್ತು. ಈ ಪರಿಸರದಲ್ಲಿ ಹಲವು ಮನೆ, ಹೋಟೆಲ್, ವಾಣಿಜ್ಯ ಸಂಕೀರ್ಣಗಳಿದ್ದು ಇವರೆಲ್ಲರೂ ಈ ಸಾರ್ವಜನಿಕ ನಲ್ಲಿ ನೀರಿನ ಬಳಕೆ ಮಾಡುತ್ತಿದ್ದರು. ಇದೀಗ ಈ ನಲ್ಲಿ ನೀರಿನ ದುರುಪಯೋಗ ಆಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ. ಸ್ಥಗಿತಗೊಳಿಸಿದೆ. ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದ್ದು ಇಲ್ಲಿ ನಲ್ಲಿ ನೀರಿನ ವ್ಯವಸ್ಥೆ ಪುನರಾರಂಭ ಮಾಡಬೇಕೆಂದು ಗ್ರಾಮಸ್ಥರು ಗ್ರಾ.ಪಂ.ಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here