ತಿಂಗಳಾಡಿ ಪ್ರಾಥಮಿಕ ಶಾಲೆ ಹಿರಿಯ ವಿದ್ಯಾರ್ಥಿ ಸಂಘ ರಚನೆ – ಅಧ್ಯಕ್ಷ: ಆನಂದ ರೈ, ಕಾರ್ಯದರ್ಶಿ: ಭಾಸ್ಕರ ಬಲ್ಲಾಳ್

0

ಪುತ್ತೂರು: ತಿಂಗಳಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆನಂದ ರೈ ಮಠ ಹಾಗೂ ಕಾರ್ಯದರ್ಶಿಯಾಗಿ ಭಾಸ್ಕರ ಬಲ್ಲಾಳ್ ಕೆದಂಬಾಡಿ ಬೀಡು ಆಯ್ಕೆಯಾಗಿದ್ದಾರೆ. ಶಾಲಾ ಎಸ್‌ಡಿ ಎಂಸಿ ಅಧ್ಯಕ್ಷ ಹಮೀದ್ ಟಿ ಎಂ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜಯಾನಂದ ರೈ ಮಿತ್ರಂಪಾಡಿ ಮತ್ತು ಜಯರಾಮ ರೈ ಮಿತ್ರಂಪಾಡಿ, ಕೋಶಾಧಿಕಾರಿಯಾಗಿ ಸೌಮ್ಯ ರೈ ಮಿತ್ತೋಡಿ , ಜೊತೆ ಕಾರ್ಯದರ್ಶಿ ಸೋಮಯ್ಯ ತಿಂಗಳಾಡಿ ಇವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವಾಣಿಶ್ರೀ ಸಂಪ್ಯ, ಹರೀಶ್ ರೈ ಮಿತ್ತೋಡಿ, ಸುಂದರ ಟಿ ತಿಂಗಳಾಡಿ, ಸೂರ್ಯ ಪ್ರಸನ್ನ ರೈ ತಿಂಗಳಾಡಿ ಇವರನ್ನು ನೇಮಿಸಲಾಯಿತು.ಸಮಿತಿ ಸದಸ್ಯರುಗಳಾಗಿ ಅಶ್ವಥ್ ಟಿ ತಿಂಗಳಾಡಿ, ಗಣೇಶ್ ರೈ ಮಿತ್ತೋಡಿ, ಚಂದ್ರಾವತಿ ರೈ ಚಾವಡಿ, ಕಿಶೋರ್ ಗೌಡ. ಪಿ ತಿಂಗಳಾಡಿ , ಪ್ರಸಾದ್ ರೈ ಚಾವಡಿ, ರಾಧಾಕೃಷ್ಣ ರೈ ಚಾವಡಿ, ನಿಶಾಂತ್ ರೈ ಸೊರಕೆ ಇವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕೆದಂಬಾಡಿ ಗ್ರಾ. ಪ೦. ಸದಸ್ಯ ಭಾಸ್ಕರ್ ರೈ ಮಿತ್ರಂಪಾಡಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ವಿಜಯ ಕೆ ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಮಮತಾ ಸಿ ಇವರು ಹಿರಿಯ ವಿದ್ಯಾರ್ಥಿ ಸಂಘದ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕಿ ಶ್ರುತಿ. ಎ ವಂದಿಸಿದರು.

LEAVE A REPLY

Please enter your comment!
Please enter your name here