ಶಾಂತಿಗೋಡು: ನಿವೃತ್ತ ಮುಖ್ಯಗುರು ಸವಿತಾರವರಿಗೆ ಗೌರವಾರ್ಪಣೆ

0

ಪುತ್ತೂರು: ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರಭಾರ ಮುಖ್ಯ ಗುರು ಸವಿತಾರವರನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಸಂಘದ ಅಧ್ಯಕ್ಷ ಆನಂದ್ ಆರ್, ಉಪಾಧ್ಯಕ್ಷ ಗಣೇಶ್ ಶ್ರೀಜ, ಪ್ರಧಾನ ಕಾರ್ಯದರ್ಶಿ ಆನಂದ್ ಬಲ್ಯಾಯ, ಶ್ರಾವ್ಯ , ಜೊತೆಕಾರ್ಯದರ್ಶಿ ಹರೀಶ್ ಕಂರ್ಬಡ್ಕ ಹಾಗೂ ಎಲ್ಲಾ ಪದಾಧಿಕಾರಿಗಳು, ಸಿ ಎ ಬ್ಯಾಂಕ್ ನರಿಮೊಗರು ಇದರ ನಿರ್ದೇಶಕ ದೇವಪ್ಪ ಗೌಡ ಓಲಾಡಿ, ಪ್ರವೀಣ್ ಶೆಟ್ಟಿ ಕುದ್ರೆಪ್ಪಾಡಿ, ಶಾಂತಿಗೋಡು ಮಹಿಳಾ ಹಾಲು ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷಿ , ವಿಕ್ರಂ ಯುವಕ ಮಂಡಲದ ಅಧ್ಯಕ್ಷ ಪ್ರಭಾತ್ ಸಾರಕರೆ ಮತ್ತು ಪದಾಧಿಕಾರಿಗಳು ಮುಖ್ಯಗುರುಗಳ ಗಣನೀಯ ಸೇವನೆ ಮೆಚ್ಚುಗೆ ಹಾಗೂ ಗೌರವನ್ನು ಸಲ್ಲಿಸಿದರು. ಅಪಾರ ಹಿರಿಯ ವಿದ್ಯಾರ್ಥಿಗಳು ಬಂದು ಶಿಕ್ಷಕರಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here