ಪುತ್ತೂರು ವಕೀಲರ ಸಂಘದ ಆಡಳಿತವು ಸೀನಿಯರ್ಸ್ ಕಮಿಟಿಗೆ ವರ್ಗಾವಣೆ

0

ಪುತ್ತೂರು ವಕೀಲರ ಸಂಘದ ಆಡಳಿತ ಮಂಡಳಿಯ ಅವಧಿಯು ಮುಕ್ತಾಯಗೊಂಡಿದ್ದು, ಮುಂದಿನ ಆಡಳಿತ ಮಂಡಳಿ ರಚನೆಗೊಳ್ಳುವ ತನಕ, ಸಂಘದ ಆಡಳಿತವನ್ನು ತ್ರಿಸದಸ್ಯ ಸೀನಿಯರ್ಸ್ ಕಮಿಟಿ ನಡೆಸಲಿದೆ. ಸೀನಿಯರ್ಸ್ ಕಮಿಟಿಯಲ್ಲಿ ಸಂಘದ ಹಿರಿಯ ವಕೀಲರಾದ ಎನ್.ಕೆ. ಜಗನ್ನಿವಾಸ್ ರಾವ್, ಬಿ. ನಿರ್ಮಲ್ ಕುಮಾರ್ ಮತ್ತು ಅರಿಯಡ್ಕ ಉದಯ ಶಂಕರ್ ಶೆಟ್ಟಿ ಇರುತ್ತಾರೆ.

ಈ ವರೆಗೆ ಸಂಘದ ಅಧ್ಯಕ್ಷರಾಗಿ ಮನೋಹರ್ ಕೆ.ವಿ., ಉಪಾಧ್ಯಕ್ಷರಾಗಿ ಕಕ್ವೆ ಕೃಷ್ಣಪ್ಪ ಗೌಡ., ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಈಶ್ವರಮಂಗಲ, ಕೋಶಾಧಿಕಾರಿಯಾಗಿ ಶ್ಯಾಮ್ ಪ್ರಸಾದ್ ಕೈಲಾರ್ ಮತ್ತು ಜತೆ ಕಾರ್ಯದರ್ಶಿಯಾಗಿ ಸೀಮಾ ನಾಗರಾಜ್ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here