ಮಾ.14: ನಿಡ್ಪಳ್ಳಿ ಗ್ರಾಮದ ದೈವಗಳಿಗೆ ಪ್ರತಿಷ್ಠಾ ವಾರ್ಷಿಕ ಸಂಕ್ರಮಣ ತಂಬಿಲ

0

ನಿಡ್ಪಳ್ಳಿ;ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳಿಗೆ ಪ್ರತಿ ವಾರ್ಷಿಕ ಸಂಕ್ರಾಂತಿ ತಂಬಿಲವು ಮಾ.14 ರಂದು ಗುರುವಾರ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

 ಬೆಳಿಗ್ಗೆ ಗಂಟೆ 9 ರಿಂದ ಗುತ್ತು ಚಾವಡಿಯಲ್ಲಿ ಗಣಪತಿ ಹೋಮ ನಂತರ ಗುತ್ತು ಚಾವಡಿಯಲ್ಲಿ ದೈವಗಳಿಗೆ ಶುದ್ದಿ ಕಲಶ  ತದನಂತರ ಶ್ರೀ ಉಳ್ಳಾಕುಲು ಮಾಡದಲ್ಲಿ ದೈವಗಳಿಗೆ ಶುದ್ದಿ ಕಲಶ, ಫಲ ಸಮರ್ಪಣೆ ನಡೆದು ಪುನಃ ಗುತ್ತು ಚಾವಡಿಯಲ್ಲಿ ದೈವಗಳಿಗೆ ತಂಬಿಲ ಸೇವೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

  ಸಾಯಂಕಾಲ ಗಂಟೆ 3 ರಿಂದ ಪಲ್ಲಕ್ಕಿ ಸಹಿತ ಗುತ್ತು ಚಾವಡಿಯಿಂದ ದೈವಗಳ ಭಂಡಾರ ಮುಂಡೂರು ಸ್ಥಾನಕ್ಕೆ ತೆರಳಿ ತಂಬಿಲ ಸೇವೆ ನಡೆದು ನಂತರ ಉಳ್ಳಾಕುಲು ಮಾಡಕ್ಕೆ ತೆರಳಿ ದೈವಗಳಿಗೆ ಸಾರ್ವಜನಿಕ ಸಂಕ್ರಾಂತಿ ತಂಬಿಲ ನಡೆಯಲಿರುವುದು.ರಾತ್ರಿ ಗಂಟೆ 8 ಕ್ಕೆ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನಡೆದು ಬಳಿಕ ಗುತ್ತು ಚಾವಡಿಯಲ್ಲಿ ದುರ್ಗಾ ಪೂಜೆ ನಡೆಯಲಿದೆ. ರಾತ್ರಿ 9.30 ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಂತರ ಉಪಹಾರದ ವ್ಯವಸ್ಥೆ ನಡೆಯುವುದು.

    ಸಾರ್ವಜನಿಕ ತಂಬಿಲ ಸೇವೆ ಮಾಡಿಸಲು ಅವಕಾಶವಿದ್ದು ಸೇವೆ ಮಾಡಲಿಚ್ಚಿಸುವವರು ರೂ.4,000 ನೀಡಿ ಸೇವೆ ಮಾಡಿಸಬಹುದು ಎಂದು ಅನುವಂಶಿಕ ಆಡಳಿತ ಮೊಕ್ತೇಸರರಾದ ಪ್ರವೀಣ್ ಎನ್. ಆರಿಗ ನಿಡ್ಪಳ್ಳಿ ಗುತ್ತು ಹಾಗೂ ಬಾರಿಕೆ ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here